ಚಂದನವನದಲ್ಲಿ ಡ್ರಗ್ಸ್ ನಶೆ: ಜಗ್ಗೇಶ, ಲಂಕೇಶ ಬಿಚ್ಚಿಟ್ಟ ರಹಸ್ಯವೇನು?

399

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಮಾದಕ ದ್ರವ್ಯ ಮಾರಾಟದ ಕಿಂಗ್ ಪಿನ್ ಅನಿಕಾಳಿಂದ ಕನ್ನಡ ಚಿತ್ರರಂಗದ ಕೆಲವರು ಹೆಸರು ಕೇಳಿ ಬರ್ತಿವೆ. ಹೀಗಾಗಿ ಕೆಲ ನಟ, ನಟಿಯರಲ್ಲಿ ನಡುಕ ಶುರುವಾಗಿದೆ. ಇದರ ನಡುವೆ ನಿರ್ದೇಶಕ ಇಂದ್ರಜೀತ ಲಂಕೇಶ ಹಾಗೂ ನವರಸ ನಾಯಕ ಜಗ್ಗೇಶ ಹೇಳಿದ ಮಾತು ಭರ್ಜರಿ ಸದ್ದು ಮಾಡ್ತಿದೆ.

ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ಸೇವನೆ ಮಾಡುವರು ಇದ್ದಾರೆ. ಅನೇಕ ಯುವಕರು, ದೊಡ್ಡ ದೊಡ್ಡ ಕುಟುಂಬಗಳಿಂದ ಬಂದವರು ಮಾದಕ ದ್ರವ್ಯ ಸೇವನೆ ಮಾಡ್ತಿದ್ದಾರೆ. ಇದರ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದಿದ್ದಾರೆ. ನಟ ಚಿರಂಜೀವಿ ಸರ್ಜಾ ಅವರ ಮರಣೋತ್ತರ ಪರೀಕ್ಷೆ ಯಾಕೆ ಮಾಡ್ಲಿಲ್ಲ ಎಂದಿದ್ದಾರೆ. ಮರಣೋತ್ತರ ಪರೀಕ್ಷೆ ಮಾಡ್ಬೇಡಿ ಎಂದು ರಾಜಕೀಯವಾಗಿ ಒತ್ತಡ ತರಲಾಯ್ತು ಎಂದು ಹೇಳಿದ್ದಾರೆ. ತಮ್ಗೆ ಸೂಕ್ತ ರಕ್ಷಣೆ ಕೊಟ್ಟರೆ ಚಿತ್ರರಂಗದವರ ಹೆಸರು ಹೇಳುವುದಾಗಿ ಇಂದ್ರಜೀತ ಲಂಕೇಶ ಹೇಳಿದ್ದಾರೆ.

ಇತ್ತೀಚೆಗೆ ಕಾರ್ ಅಪಘಾತದಲ್ಲಿ ನಟಿಯೊಬ್ಬಳು ವಿವಾದಕ್ಕೆ ಸಿಲುಕಿದ್ರು. ಆ ನಟಿ ಹಾಗೂ ನಾಲ್ಕು ಜನ ಹುಡುಗರು ಇದ್ದ ಕಾರಿನಲ್ಲಿ ಡ್ರಗ್ಸ್ ಸಿಕ್ಕಿತ್ತು. ಎರಡು ದಿನವಾದ್ಮೇಲೆ ಕೇಸ್ ಕ್ಲೋಸ್ ಆಯ್ತು ಎಂದು ಇಂದ್ರಜೀತ ಹೇಳಿದ್ದಾರೆ. ಆ ನಟಿ ಯಾರು ಎಂದು ಎಲ್ಲರಿಗೂ ಗೊತ್ತಿದೆ.

ಇನ್ನು ನವರಸ ನಾಯಕ ಜಗ್ಗೇಶ ಟ್ವೀಟ್ ಮೂಲಕ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!