ರೈತ ಚಳವಳಿ ಮುಂದುವರೆಯಲಿದೆ: ಟಿಕಾಯತ್

217

ಪ್ರಜಾಸ್ತ್ರ ಸುದ್ದಿ

ಚಿತ್ರದುರ್ಗ: ರೈತರ ಹೋರಾಟ ಮುಂದುವರೆಯಲಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖ್ಯಸ್ಥ ರಾಕೇಶ ಟಿಕಾಯತ್ ಹೇಳಿದ್ದಾರೆ. ಕರ್ನಾಟಕ ಪ್ರವಾಸದಲ್ಲಿರುವ ಅವರು, ಸೋಮವಾರ ಚಿತ್ರದುರ್ಗದಲ್ಲಿ ಮಾತ್ನಾಡಿದರು.

ಕೃಷಿಕರ ಬದುಕಿಗೆ ಮಾರಕವಾಗುವ ಮೂರು ಕಾನೂನುಗಳು ಬಂದಿವೆ. ಈ ಕಾಯ್ದೆಗಳು ಸಂಪೂರ್ಣವಾಗಿ ರೈತ ವಿರೋಧಿಯಾಗಿವೆ. ಕಳೆದ ನಾಲ್ಕು ತಿಂಗಳಿಂದ ನಮ್ಮ ಹೋರಾಟ ನಡೆದಿದೆ. ಅದು ಮುಂದುವರೆಯಲಿದೆ. ಕೃಷಿ ಕಾಯ್ದೆ ಹಿಂದಕ್ಕೆ ಪಡೆಯಬೇಕು. ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆಯಾದರೂ ನೀಡಬೇಕು ಎಂದರು.

ಕೃಷಿ ಬೆಳೆಗಳಿಗೆ ಬೆಂಬಲ ನೀಡಲಾಗುತ್ತೆ. ಆದ್ರೆ, ಕಾನೂನು ರೂಪದಲ್ಲಿ ಇಲ್ಲ. ಬರೀ ಅದು ಘೋಷಣೆ ರೂಪದಲ್ಲಿದೆ. ಇದಕ್ಕೆ ಕಾನೂನಿನ ಚೌಕಟ್ಟು ಬೇಕು. ಇದಕ್ಕಾಗಿ ನಮ್ಮ ಹೋರಾಟ ನಡೆದಿದೆ. ದೇಶದ ತುಂಬಾ ನಮ್ಗೆ ಬೆಂಬಲ ಸಿಕ್ಕಿದೆ ಎಂದರು.




Leave a Reply

Your email address will not be published. Required fields are marked *

error: Content is protected !!