ಗಾಯಕ ಲಕ್ಷ್ಮಿರಾಮ್, ನಿರ್ದೇಶಕ ಯಶವಂತಗೆ ಸೇವಾ ಭೂಷಣ ಪ್ರಶಸ್ತಿ

454

ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ

ಬೆಂಗಳೂರು: ಸಾಹಿತ್ಯ, ರಂಗಭೂಮಿ, ಕಲೆ, ಸಂಗೀತ, ಪತ್ರಿಕೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರಿಗೆ, ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ವತಿಯಿಂದ ಸೇವಾ ಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ, ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯ ದಶಮಾನೋತ್ಸವ ಮತ್ತು ಮೈಸೂರು ಸಂಸ್ಥಾನದಲ್ಲಿ ಮೀಸಲಾತಿಗೆ 101ನೇ ವರ್ಷದ ಸಂಭ್ರಮ ಆಚರಣೆ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಲಾಯ್ತು.

ಇದೆ ವೇಳೆ ನಾಡಿನ ಖ್ಯಾತ ಗಾಯಕ ಲಕ್ಷ್ಮಿರಾಮ್, ರಂಗ ನಿರ್ದೇಶಕ ಯಶವಂತ ಕಾರ್ಗಳ್ಳಿ, ಗಾಯಕಿ ಎಸ್.ಲಾಸ್ಯಗೆ ಸೇವಾ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯ್ತು. ಈ ವೇಳೆ ವೇದಿಕೆ ಅಧ್ಯಕ್ಷರಾದ ಎಚ್.ಎಲ್ ಯಮುನಾ, ಸರ್ಕಾರಿ ನೌಕರರ ಸಂಘದ ಎಚ್.ಕೆ ರಾಮು, ಕೃಷಿ ವಿಜ್ಞಾನಿ ವಸಂತ ಕುಮಾರ್ ತಿಮಕಾಪುರ, ಪತ್ರಕರ್ತ ಕೆ ದೀಪಕ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!