ಹೆತ್ತವರಿಗೆ ಮಗನಿಂದ ಕಿರುಕುಳ, ತಂದೆಯಿಂದಲೇ ಹತ್ಯೆ!

277

ಪ್ರಜಾಸ್ತ್ರ ಅಪರಾಧ ಸುದ್ದಿ

ದೊಡ್ಡಬಳ್ಳಾಪುರ: ಕುಡಿತದ ದಾಸನಾಗಿದ್ದ ಮಗ ಹೆತ್ತವರಿಗೆ ನಿತ್ಯ ಕಿರುಕುಳ ನೀಡುತ್ತಿದ್ದ. ಇದರಿಂದ ರೋಸಿ ಹೋದ ತಂದೆ ಮಗನನ್ನು ಮರಕ್ಕೆ ಕಟ್ಟಿ ಹಾಕಿ, ಬೆಂಕಿ ಹಚ್ಚಿ ಕೊಲೆ ಮಾಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

ವಾಣಿಗರಹಳ್ಳಿಯ ಆದರ್ಶ(28) ಕೊಲೆಯಾದ ದುರ್ದೈವಿ. ಜಯರಾಮಯ್ಯ(58) ಕೊಲೆ ಮಾಡಿದ ತಂದೆ. ಜಯರಾಮಯ್ಯನಿಗೆ ಆದರ್ಶ ಒಬ್ಬನೇ ಮಗ. ಆದರೆ, ಕಡಿತದ ಚಟಕ್ಕೆ ಬಿದ್ದು ಹೆತ್ತವರಿಗೆ ಕಿರುಕುಳ ನೀಡುತ್ತಿದ್ದ. ಮೊನ್ನೆ ತಾಯಿ ಮೇಲೆ ಹಲ್ಲೆ ಮಾಡಿದ್ದ, ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ ರಾತ್ರಿ ತಂದೆ, ಮಗನ ನಡುವೆ ಗಲಾಟೆಯಾಗಿದೆ. ಹೀಗಾಗಿ ಮಗನನ್ನು ಹೊಡೆದು ಹೊಲದಲ್ಲಿನ ಹಲಸಿನ ಮರಕ್ಕೆ ಕಟ್ಟಿ ಹಾಕಿ ಪೆಟ್ರೋಲ್ ಸುರಿದು ಸುಟ್ಟು ಕೊಲೆ ಮಾಡಿದ್ದಾನೆ. ಪೊಲೀಸರು ಜಯರಾಮಯ್ಯನನ್ನು ಬಂಧಿಸಿದ್ದು, ತನಿಖೆ ನಡೆಸಿದ್ದಾರೆ. ಕೊಲೆಗೆ ಜಯರಾಮಯ್ಯನಿಗೆ ಯಾರೆಲ್ಲ ಸಾಥ್ ಕೊಟ್ಟಿದ್ದಾರೆ ಅನ್ನೋದರ ತನಿಖೆ ನಡೆದಿದೆ.




Leave a Reply

Your email address will not be published. Required fields are marked *

error: Content is protected !!