ನವದೆಹಲಿ: ಬಿಜೆಪಿ ಹಾಗೂ ಭಜರಂಗದಳ ಪಾಕಿಸ್ತಾನದ ಐಎಸ್ಐನಿಂದ ಹಣ ಪಡೆದುಕೊಳ್ತಿದೆ ಎಂದು ಹೇಳಿದ್ದ ಕಾಂಗ್ರೆಸ್ ನ ಹಿರಿಯ ಮುಖಂಡ ದಿಗ್ವಿಜಯ ಸಿಂಗ್ ವಿರುದ್ಧ ಕೇಸ್ ದಾಖಲಾಗಿವೆ. ಮುಜಾಫುರ್ ಕೋರ್ಟ್ ನಲ್ಲಿ ಸೂರ್ಯಕಾಂತ ತ್ರಿಪಾಠಿ ಎಂಬುವವರು ದಿಗ್ವಿಜಯ ಸಿಂಗ್ ವಿರುದ್ಧ ದೂರು ದಾಖಲಿಸಿದ್ದಾರೆ.
ಇತ್ತ ಉತ್ತರ ಪ್ರದೇಶನ ಸಂಭಾಲ್ ನಗರ ಘಟಕದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸತೀಶ ಅರೋರಾ ದಿಗ್ವಿಜಯ ಸಿಂಗ್ ವಿರುದ್ಧ ದೂರು ದಾಖಲಿಸಿದ್ದಾರೆ. ಚಂದೌಸಿ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ಎರಡು ಪ್ರಕರಣ ಸೆಪ್ಟೆಂಬರ್ 13ರಂದು ವಿಚಾರಣೆಗೆ ಬರಲಿವೆ. ಶನಿವಾರ ದಿಗ್ವಿಜಯ ಸಿಂಗ್ ವಿವಾದಾತ್ಮಕ ಆರೋಪ ಮಾಡಿದ್ರು. ಪಾಕಿಸ್ತಾನದ ಕುಖ್ಯಾತ ಪತ್ತೇದಾರಿ ಏಜೆನ್ಸಿ ಐಎಸ್ಐನಿಂದ ಬಿಜೆಪಿ ಹಾಗೂ ಭಜರಂಗದಳ ಹಣ ಪಡೆಯುತ್ತಿದೆ ಎಂದು ಆರೋಪಿಸಿದ್ರು.