ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಶನಿವಾರ ಮಧ್ಯರಾತ್ರಿ ಭಾರೀ ಅಗ್ನಿ ದುರಂತವೊಂದು ಸಂಭವಿಸಿದೆ. ಇದರಿಂದಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಫ್ಲೈವುಡ್ ಸುಟ್ಟು ಬೂದಿಯಾಗಿವೆ. ಟಿಂಬರ್ ಲೇಔಟ್ ನಲ್ಲಿ ರಾತ್ರಿ ಸುಮಾರು 1 ಗಂಟೆ ಸಮಯದಲ್ಲಿ ಬೆಂಕಿ ಅನಾಹತ ನಡೆದಿದೆ.
ನವೀನ್ ಗುಪ್ತಾ ಎಂಬುವವರಿಗೆ ಸೇರಿದ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಎಲ್ಲೆಡೆ ವ್ಯಾಪಿಸಿದೆ. ಈಗ ಸಾರ್ವಜನಿಕರಿಗೆ ಇದು ಗೊತ್ತಾಗಿ ಅಗ್ನಿ ಶಾಮಕ ಸಿಬ್ಬಂದಿಗೆ ಕಾಲ್ ಮಾಡಿದ್ದಾರೆ. 10 ಅಗ್ನಿ ಶಾಮಕ ವಾಹನಗಳು ಬಂದು ಬೆಂಕಿ ನಂದಿಸುವ ವೇಳೆಗಾಗಲೇ ಲಕ್ಷಾಂತರ ಮೌಲ್ಯದ ಫ್ಲೈವುಡ್ ಸುಟ್ಟು ಹೋಗಿದ್ದವು.
ಗೋದಾಮು ಮಾಲೀಕ ನವೀನ್ ಗುಪ್ತಾ 7 ವರ್ಷಗಳಿಂದ ಕಟ್ಟಿಗೆ ಬ್ಯುಸಿನೆಸ್ ಮಾಡುತ್ತಿದ್ದಾರೆ. ಎಂದಿನಂತೆ ಶನಿವಾರ ಸಂಜೆ ಬೀಗ ಹಾಕಿಕೊಂಡು ಹೋಗಿದ್ದಾರೆ. ಯಾರು ಇಲ್ಲದ ವೇಳೆಯಲ್ಲಿ ಈ ಅನಾಹುತ ನಡೆದಿದೆ. ಇದೆಲ್ಲ ಹೇಗಾಯಿತು ಅನ್ನೋದರ ಬಗ್ಗೆ ತಿಳಿದು ಬರಬೇಕಿದೆ.