ಅಪಾಯದ ಮಟ್ಟ ಮೀರಿದ ಘಟಪ್ರಭಾ

520

ಪ್ರಜಾಸ್ತ್ರ ಸುದ್ದಿ

ಬಾಗಲಕೋಟೆ: ಜಿಲ್ಲೆಯ ತುಂಬಾ ಭರ್ಜರಿ ಮಳೆಯಾಗ್ತಿದ್ದು, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಮುಧೋಳ ತಾಲೂಕಿನ ಘಟಪ್ರಭಾ ಸೇತುವೆಗಳು ಮುಳುಗಡೆಯಾಗುವ ಮಟ್ಟ ತಲುಪಿವೆ. ಹೀಗಾಗಿ ನೆರೆ ಭೀತಿ ಮೂಡಿದೆ.

ಇನ್ನು ಘಟಪ್ರಭಾ ನದಿ ದಂಡೆಯಲ್ಲಿ ವಾಸಿಸುವ ಎಲ್ಲ ಗ್ರಾಮಗಳ ಜನರಿಗೆ ಎಚ್ಚರಿಕೆ ನೀಡಲಾಗಿದೆ. 80 ಸಾವಿರ ಕ್ಯೂಸೆಕ್ ನೀರು ಹರಿದು ಬರ್ತಿದ್ದು ಘಟಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹಿಡಿಕಲ್ ಡ್ಯಾಂನಿಂದ 10 ಸಾವಿರ ಕ್ಯೂಸೆಕ್ ನೀರು ಹರಿಬಿಡಲಾಗಿದೆ.

ಅಪಾರ ಪ್ರಮಾಣದಲ್ಲಿ ನೀರು ಹರಿಬಿಡಲಾಗಿದ್ರಿಂದ ಸರ್ವಜನಿಕರು ಕೂಡಲೇ ತಮ್ಮ ಜಾನುವಾರು ಸಮೇತ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಕೋರಲಾಗಿದೆ. ಕೆಲವೇ ಘಂಟೆಗಳಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯಲಿದ್ದು,  ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ ಮಾಡಿಕೊಳ್ಳಲಾಗಿದೆ.




Leave a Reply

Your email address will not be published. Required fields are marked *

error: Content is protected !!