ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಯುವತಿ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಕಾಸ್ತ್ರಗಳಿಂದ ಮಾರಾಮಾರಿ ನಡೆದಿದೆ. ಈ ಸಂಬಂಧ 7 ಜನರನ್ನು ಪೊಲೀಸರು ಬಂಧಿಸಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ನಾಗರಭಾವಿ ಹತ್ತಿರದ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಗಲಾಟೆ ಮಾಡಿಕೊಂಡಿದ್ದಾರೆ. ಯುವತಿಯೊಬ್ಬಳ ವಿಚಾರಕ್ಕೆ ದರ್ಶನ್ ಹಾಗೂ ಸಾಹಸ್ ಅನ್ನೋ ವಿದ್ಯಾರ್ಥಿಗಳ ತಂಡದ ನಡುವೆ ಗಲಾಟೆ ನಡೆದಿದೆ. ಇದೇ ವಿಚಾರಕ್ಕೆ ಸಾಹಸ್ ಕಾಲೇಜಿನಿಂದ ಸಸ್ಪೆಂಡ್ ಆಗಿದ್ದ. ದರ್ಶನ್ ನನ್ನು ಹೊಡೆಯುತ್ತೇನೆ ಎಂದು ಸ್ನೇಹಿತರ ಹತ್ತಿರ ಸಾಹಸ್ ಹೇಳಿಕೊಂಡಿದ್ದ.
ದರ್ಶನ್ ಮೊದಲ ವರ್ಷದ ಬಿಬಿಎ ಓದುತ್ತಿದ್ದ. ಸಾಹಸ್ ಸಿನೀಯರ್ ಇದ್ದ. ಹೀಗಾಗಿ ಈ ಹುಡಗರ ಎದುರು ಬಿಲ್ಡಪ್ ತೆಗೆದುಕೊಳ್ಳುತ್ತಿದ್ದನಂತೆ. ದರ್ಶನ್ ತನನ್ನನ್ನು ಹೊಡೆಯಬಹುದು ಅಂತಾ ತನ್ನ ಕಾಲೇಜಿನ ಸ್ನೇಹಿತರಾದ ಜೀವನ್, ಚಂದನ್ ಹಾಗೂ ಬೇರೆ ಕಾಲೇಜಿನ ಸ್ನೇಹಿತರಾದ ಗೌತಮ್, ರವಿಕುಮಾರ್, ಅಭಿಷೇಕ್, ಸೂರ್ಯ ಎಂಬುವವರನ್ನು ಕರೆಸಿಕೊಂಡು ದಾಳಿ ಮಾಡಿದ್ದಾನೆ.
ಈಗ ಅನ್ನಪೂರ್ಣೇಶ್ವರ ನಗರ ಠಾಣೆ ಪೊಲೀಸರು 7 ಜನರನ್ನು ಬಂಧಿಸಿದ್ದಾರೆ. ದರ್ಶನ್ ಗೆ ಹೆದರಿಸಲು ಕರೆದುಕೊಂಡು ಬಂದಿದ್ದಾನೆ ಅಂತಾ ಹೋದರೆ, ಅವನು ಲಾಂಗ್ ತಂದಿರುವುದು ನಿಮಗೆ ಗೊತ್ತಿರಲಿಲ್ಲ. ಈಗ ನಮ್ಮ ಜೀವನಾನು ಹಾಳಾಗಿದೆ ಅಂತಿದ್ದಾರೆ. ಓದುವ ವಯಸ್ಸಿನಲ್ಲಿ ಇಲ್ಲದ ವಿಚಾರಕ್ಕೆ ಗಲಾಟೆ ಮಾಡಿಕೊಂಡು ಜೈಲು ಕಂಬಿ ಎಣಿಸುವ ಪರಿಸ್ಥಿತಿ ಬಂದಿದೆ.