ಯುವಕನ ಕಾಟ, ಬಾಲಕಿ ಆತ್ಮಹತ್ಯೆ

134

ಪ್ರಜಾಸ್ತ್ರ ಸುದ್ದಿ

ಶಿವಮೊಗ್ಗ: ಯುವಕನೊಬ್ಬ ಪ್ರೀತಿಸು ಎಂದು ಕಾಟ ಕೊಡುತ್ತಿದ್ದ ಕಾರಣಕ್ಕೆ ಅಪ್ರಾಪ್ತೆ ಆತ್ಮಹತ್ಯೆ ಮಾಡಿಕೊಂಡು ದುರಂತ ಘಟನೆ ಗೊಂದಿಚಟ್ನಿಹಳ್ಳಿಯಲ್ಲಿ ನಡೆದಿದೆ. 14 ವರ್ಷದ ವರ್ಷಿಣಿ ಮೃತ ಬಾಲಕಿ.

ತ್ಯಾಗರಾಜ ಅನ್ನೋ ಯುವಕ ಬಾಲಕಿ ವರ್ಷಿಣಿಗೆ ಪ್ರೀತಿಸುವ ಎಂದು ಕಾಟ ಕೊಡುತ್ತಿದ್ದನಂತೆ.  ಇದಕ್ಕೆ ಬಾಲಕಿ ನಿರಾಕರಿಸಿದ್ದಾಳೆ. ಆಕೆಯ ಪೋಷಕರು ಎರಡು ತಿಂಗಳ ಹಿಂದೆ ಎಚ್ಚರಿಕೆ ನೀಡಿದ್ದಾರೆ. ಇನ್ಮುಂದೆ ತೊಂದರೆ ಕೊಡುವುದಿಲ್ಲವೆಂದು ಹೇಳಿ ಮತ್ತೆ ಅದೆ ಕೆಲಸ ಮಾಡಿದ್ದಾನೆ.

ಯುವಕನ ಕಾಟಕ್ಕೆ ಬೇಸತ್ತು ಅನ್ಯಾಯವಾಗಿ ಬಾಲಕಿ ಶನಿವಾರ ರಾತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!