ಮೂರು ವರ್ಷಗಳ ಬಳಿಕ ನಟ ರಕ್ಷಿತ ಶೆಟ್ಟಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ‘ಅವನೇ ಶ್ರೀಮನ್ನಾರಾಯಣ’ ಚಿತ್ರ ಇಂದು ರಿಲೀಸ್ ಆಗಿ ಗ್ರ್ಯಾಂಡ್ ಓಪನಿಂಗ್ ಪಡೆದಿದೆ. ಸಿನಿಮಾ ನೋಡಲು ಅವರ ಫ್ಯಾನ್ಸ್ ಮುಗಿಬೀಳ್ತಿದ್ದಾರೆ.
ಅಮರಾವತಿ ಅನ್ನೋ ಕಾಲ್ಪನಿಕ ಊರಿನಲ್ಲಿ ನಡೆದ ಲೂಟಿಯೊಂದರ ಸುತ್ತ ಸುತ್ತುವ ಕಥೆಯನ್ನ ಹೊಂದಿದೆ. ಕಳ್ಳ-ಪೊಲೀಸ್ ಸ್ಟೋರಿಯಲ್ಲಿ ಕಾಮಿಡಿಯಿದೆ. ಲವ್ ಇದೆ. ಪ್ಲ್ಯಾಶ್ ಬ್ಯಾಕ್ ಸ್ಟೋರಿ ಇದೆ. ಹೀಗಾಗಿ ನಿರೀಕ್ಷೆಯೊಂದಿಗೆ ಸಿನ್ಮಾ ನೋಡಲು ಬರುವ ಜನಕ್ಕೆ ಮೋಸವಿಲ್ಲ ಅಂತಾ ಸಿನ್ಮಾ ನೋಡಿದವರು ಹೇಳ್ತಿದ್ದಾರೆ.
ಮೂರು ವರ್ಷದ ಬಳಿಕ ಬಂದ ಸಿನ್ಮಾದ ಬಗ್ಗೆ ಅಭಿಮಾನಿಗಳು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಲೇಟ್ ಆಗಿ ಬಂದರೂ ಮೂವಿ ಸೂಪರ್ ಅಂತಿದ್ದಾರೆ. ಇನ್ನು ಕೆಲವರು, ಚಿತ್ರದಲ್ಲಿ ಬೆಲ್ ಬಾಟಮ್ ಛಾಯೆ ಕಾಣಿಸ್ತಿದೆ ಅಂತಾ ಹೇಳಿದ್ದಾರೆ. ಇನ್ನು ಮೊದಲ ದಿನವೇ 10ರಿಂದ 15 ಕೋಟಿ ಗಳಿಕೆ ಮಾಡುತ್ತೆ ಅಂತಿದ್ದಾರೆ.