ನವದೆಹಲಿ: ಕಾಂಗ್ರೆಸ್ ನಿಂದ ಇಂದು ದೇಶದಾದ್ಯಂತ ಸಂವಿಧಾನ ಉಳಿಸಿ-ಭಾರತ ರಕ್ಷಿಸಿ ಅನ್ನೋ ಘೋಷವಾಕ್ಯದೊಂದಿಗೆ ಪ್ರತಿಭಟನಾ ಜಾಥಾ ನಡೆಯಲಿದೆ. ಬೆಳಗ್ಗೆ 9.30ಕ್ಕೆ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಧ್ವಜಾರೋಹಣ ಮಾಡುವ ಮೂಲಕ ಜಾಥಾಗೆ ಚಾಲನೆ ಸಿಗಲಿದೆ.
ಸಂಸ್ಥಾಪನ ದಿನದ ಅಂಗವಾಗಿ ಕಾಂಗ್ರೆಸ್ ಜಾಥಾ ಹಮ್ಮಿಕೊಂಡಿದ್ದು ದೆಹಲಿಯ ಕಾರ್ಯಕ್ರಮದ ಬಳಿಕ ಪ್ರತಿ ರಾಜ್ಯಗಳಲ್ಲಿನ ಘಟಕದ ಅಧ್ಯಕ್ಷರ ಮುಂದಾಳತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಅಲ್ದೇ, ಸಾರ್ವಜನಿಕ ಸಭೆಗಳನ್ನ ನಡೆಸಿ ಸಂವಿಧಾನಕ್ಕೆ ಒದಗಿ ಬಂದಿರುವ ಅಪಾಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ ತಿಳಿಸಿದ್ದಾರೆ.