ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಕಾಂಗ್ರೆಸ್ ವಾಟ್ಸಪ್ ಗ್ರೂಪ್ ನಿಂದ ಎಕ್ಸಿಟ್ ಆಗಿದ್ದಾರೆ ಅನ್ನೋ ಸುದ್ದಿ ಎಲ್ಲೆಡೆ ಹರಿದಾಡ್ತಿದೆ. ಶುಕ್ರವಾರ ಸಂಜೆ ಅವರು ಗ್ರೂಪ್ ನಿಂದ ಆಚೆ ಬಂದಿದ್ದಾರೆ ಎನ್ನಲಾಗ್ತಿದೆ.
ಇನ್ನು ಕೆಪಿಸಿಸಿ ಪದಾಧಿಕಾರಿಗಳ ಗ್ರೂಪ್, ಎಐಸಿಸಿ ವಕ್ತಾರರ ಗ್ರೂಪ್, ಎಐಸಿಸಿ ಮೀಡಿಯಾ ಗ್ರೂಪ್ ನಿಂದಲೂ ದಿನೇಶ್ ಗುಂಡೂರಾವ್ ಅವರು ಹೊರ ಬಂದಿದ್ದಾರೆ ಅಂತಾ ಹೇಳಲಾಗ್ತಿದೆ. ಮೈತ್ರಿ ಸರ್ಕಾರದ ಇಬ್ಬರು ನೂತನ ಸಚಿವರ ಪ್ರಮಾಣ ವಚನ ಸಮಾರಂಭಕ್ಕೂ ಗೈರಯಾಗಿರುವ ಗುಂಡೂರಾವ್ ಎರಡು ದಿನಗಳಿಂದ ಕಚೇರಿಗೆ ಬಂದಿಲ್ಲ ಅಂತಾ ಹೇಳಲಾಗ್ತಿದೆ.