ಬೆಂಗಳೂರು: ನಾನು ಚುನಾವಣೆಯಲ್ಲಿ ಸೋತಿರಬಹುದು. ಆದ್ರೆ, ನಮ್ಮ ಉದ್ದೇಶ ಗೆದ್ದಿದೆ ಅಂತಾ ಮಾಜಿ ಸಚಿವ ಹೆಚ್.ವಿಶ್ವನಾಥ, ಮಾಜಿ ಸಿಎಂ ಸಿದ್ದರಾಮಯ್ಯ ಕಾಲೆಳದಿದ್ದಾರೆ. ನಾವು ಯಾವುದೇ ಸಚಿವ ಸ್ಥಾನದ ಬೇಡಿಕೆ ಇಟ್ಟಿಲ್ಲ. ನಮ್ಗೆ ಯಡಿಯೂರಪ್ಪ ಹೈಕಮಾಂಡ್ ಅಂತಾ ತಿಳಿಸಿದ್ರು.
ಕಾಂಗ್ರೆಸ್ ಮುಳುಗುವ ಮೊದ್ಲೇ ಮುಳುಗುವವರು ಅದ್ರಿಂದ ಹೊರ ಬಂದಿರುವುದು ಭಾಗ್ಯ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಬಗ್ಗೆ ನನ್ಗೆ ಗೌರವವಿದೆ. ಆದ್ರೆ, ಅಲ್ಲಿನ ನಾಯಕತ್ವದ ಬಗ್ಗೆ ಬೇಸರವಿದೆ ಅಂತಾ ಹೇಳಿದ್ರು. ನಾನು 40 ವರ್ಷ ಕಾಂಗ್ರೆಸ್ ನಲ್ಲಿದ್ದೆ. ಅಯೋಗ್ಯ ಸರ್ಕಾರವನ್ನ ಕಿತ್ತೆಸೆಯಲು ಪಕ್ಷ ಬಿಟ್ಟೆ. ಸಿದ್ದರಾಮಯ್ಯ 6 ಬಾರಿ, ಮಾಜಿ ಸ್ಪೀಕರ್ ರಮೇಶಕುಮಾರ 9 ಬಾರಿ ಪಕ್ಷ ಬದಲಿಸಿದ್ದಾರೆ ಅಂತಾ ಆಕ್ರೋಶ ವ್ಯಕ್ತಪಡಿಸಿದ್ರು.