ಪ್ರಜಾಸ್ತ್ರ ಸುದ್ದಿ
ತುಮಕೂರು: ಎಳೆನೀರು ತುಂಬಿಕೊಂಡು ಬರುತ್ತಿದ್ದ ಲಾರಿಯೊಂದು ಕುರಿಗಳ ಮೇಲೆ ಹರಿದ ಪರಿಣಾಮ ಬರೋಬ್ಬರಿ 40 ಕುರಿಗಳು ಸಾವನ್ನಪ್ಪಿರುವ ಘಟನೆ ಕುಣಿಗಲ್ ಹತ್ತಿರದ ಗವಿಮಠ ಸೇತುವೆ ಬಳಿ ನಡೆದಿದೆ.
ಶುಕ್ರವಾರ ಮುಂಜಾನೆ ಈ ಘಟನೆ ನಡೆದಿದ್ದು ರೈತರು ಕಣ್ಣೀರು ಹಾಕುತ್ತಿದ್ದಾರೆ. ಮಡಕಶಿರಾ ತಾಲೂಕಿನ ಗುಡಿಬಂಡೆ ನಿವಾಸಿಗಳಾದ ರಂಗಮಾರಯ್ಯ, ದೊಡ್ಡ ಮಾರಪ್ಪ, ದೊಡ್ಡ ಈರಯ್ಯ, ಚಂದ್ರಪ್ಪ ಸೇರಿದಂತೆ ಇತರರಿಗೆ ಸೇರಿದ ಸುಮಾರು 800 ಕುರಿಗಳು ಇದ್ದವು. ಮಂದೆಗಳನ್ನು ಮೇಯಿಸಲು ಕುಣಿಗಲ್ ಕಡೆ ಬಂದಿದ್ದಾಗ ಈ ದುರಂತ ನಡೆದಿದೆ.
ಬೆಳಗಿನಜಾವ ನಾವು ಕುರಿಗಳನ್ನು ತೆಗೆದುಕೊಂಡು ಹೊರಟಿದ್ದೇವು. ಎಳೆನೀರು ತುಂಬಿಕೊಂಡು ಬಂದ ಲಾರಿ ಅತಿವೇಗವಾಗಿ ಬಂದ ಲಾರಿ ಕುರಿಮುಂದೆ ಮೇಲೆ ಹರಿಯಿತು ಎಂದು ಮಾರಪ್ಪ ಹೇಳಿದ್ದಾರೆ. ಕುಣಿಗಲ್ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.