ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಹೊನ್ನಳ್ಳಿ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಕ್ರಿಯರಾಗಿರುತ್ತಾರೆ. ಇತ್ತೀಚೆಗೆ ಅವರ ಸಹೋದರನ ಮಗ ನಾಪತ್ತೆಯಾಗಿ, ನಂತರ ತುಂಗಾ ಕಾಲುವೆಯಲ್ಲಿ ಬಿದ್ದ ಕಾರಿನಲ್ಲಿ ಮೃತದೇಹ ಪತ್ತೆಯಾಯಿತು.
ಸಹೋದರನ ಮಗ ನಾಪತ್ತೆಯಾದ ದಿನದಿಂದ ಸಾಕಷ್ಟು ಕಣ್ಣೀರು ಹಾಕುತ್ತಿರುವ ಶಾಸಕ ರೇಣುಕಾಚಾರ್ಯ, ತಮ್ಮ ಟ್ವೀಟರ್ ನಲ್ಲಿ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ. ಆದರೆ, ಇದೀಗ ಅಪ್ಲೋಡ್ ಮಾಡಿರುವ ವಿಡಿಯೋ ನೋಡಿದ ಜನರು ಟ್ರೋಲ್ ಮಾಡುವ ಜೊತೆಗೆ ಕಿಡಿ ಕಾರುತ್ತಿದ್ದಾರೆ.
ಅದೇನು ಅಂದರೆ, ಸಹೋದರ ಮಗನ ಸಾವಿನಿಂದ ಸಾಕಷ್ಟು ನೋವಿನಲ್ಲಿರುವ ಶಾಸಕರಿಗೆ ನಾಲ್ಕು ಜನ ಮಹಿಳೆಯರು ಊಟ ಮಾಡಿಸುತ್ತಿರುವ ವಿಡಿಯೋ ಟ್ರೋಲ್ ಮಾಡಲಾಗುತ್ತಿದೆ. ಇಂತಹ ನೋವಿನ ಸಂದರ್ಭದಲ್ಲಿಯೂ ನಾಲ್ಕು ಜನ ಮಹಿಳೆಯರು ಏಕಕಾಲದಲ್ಲಿ ಊಟ ಮಾಡಿಸುತ್ತಿರುವುದನ್ನು ವಿಡಿಯೋ ಮಾಡಿ ಟ್ವೀಟರ್ ನಲ್ಲಿ ಅಪ್ಲೋಡ್ ಮಾಡಿರುವುದಕ್ಕೆ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. ಮೋದಿನೆ ಸೈಡ್ ಹೊಡೆಯುತ್ತಿದ್ದಾರೆ ಎಂದು ಕಾಲೆಳೆಯುತ್ತಿದ್ದಾರೆ.