ಹೈದ್ರಾಬಾದ್: ಪಶು ವೈದ್ಯೆಯ ಹತ್ಯಾಚಾರ ಪ್ರಕರಣದ ನಾಲ್ವರ ಆರೋಪಿಗಳನ್ನ ಎನ್ ಕೌಂಟರ್ ಮಾಡಲಾಗಿದೆ. ಸೈಬರಬಾದ್ ಪೊಲೀಸ್ ಆಯುಕ್ತರಾದ ವಿಶ್ವನಾಥ ಸಜ್ಜನ ಅವರ ಟೀಂ ಎನ್ ಕೌಂಟರ್ ಮೂಲಕ ಕಾಮುಕರನ್ನ ಇಂದು ಮುಂಜಾನೆ ಸುಮಾರು 3.30ಕ್ಕೆ ಪಿನಿಶ್ ಮಾಡಲಾಗಿದೆ.
ಅಂದಾಗೆ ಪೊಲೀಸ್ ಆಯುಕ್ತರಾದ ವಿಶ್ವನಾಥ ಸಜ್ಜನ ಅವರು ಕರ್ನಾಟಕದವರು. ಮೇಲಾಗಿ ಹುಬ್ಬಳ್ಳಿ ಮೂಲದವರು. ಇವರ ಟೀಂ ಆರೀಫ, ಚೆನ್ನಕೇಶವುಲು, ಶಿವು, ನವೀನ ಅನ್ನೋ ನಾಲ್ವರು ಕಾಮಕ್ರಿಮಿಗಳನ್ನ ಎನ್ ಕೌಂಟರ್ ಮೂಲಕ ಹೊಸಕಿ ಹಾಕಿದ್ದಾರೆ.