ಹೈದ್ರಾಬಾದ್: ಪಶು ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳು ಪಿನಿಶ್ ಆಗಿದ್ದಾರೆ. ಪ್ರಕರಣದ ನಾಲ್ವರು ಆರೋಪಿಗಳು ಎನ್ ಕೌಂಟರ್ ನಲ್ಲಿ ಬಲಿಯಾಗಿದ್ದಾರೆ ಅಂತಾ ತಿಳಿದು ಬಂದಿದೆ.
ಅಪರಾಧ ನಡೆದ ಸ್ಥಳಕ್ಕೆ ಆರೋಪಿಗಳನ್ನ ಕರೆದುಕೊಂಡು ಹೋಗುವಾಗ ತಪ್ಪಿಸಿಕೊಳ್ಳಲು ನೋಡಿದ್ದಾರೆ. ಆಗ ಅವರ ಮೇಲೆ ಎನ್ ಕೌಂಟರ್ ಮಾಡಲಾಯ್ತು ಅಂತಾ ಹೇಳಲಾಗ್ತಿದೆ.
ನವೆಂಬರ್ 28ರಂದು ಹೈದ್ರಾಬಾದ್ ನ ರಂಗರೆಡ್ಡಿ ಜಿಲ್ಲೆಯ ಚಟನಪಲ್ಲಿ ಸೇತುವೆ ಬಳಿ 26 ವರ್ಷದ ಪಶು ವೈದ್ಯೆಯ ಸುಟ್ಟ ಮೃತದೇಹ ಪತ್ತೆಯಾಗಿತ್ತು. ನಾಲ್ವರು ಆರೋಪಿಗಳು ಆಕೆಯ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ್ರು. ದೆಹಲಿಯ ನಿರ್ಭಯ ಕೇಸ್ ಬಳಿಕ ಇಡೀ ದೇಶವನ್ನ ಮತ್ತೆ ಬೆಚ್ಚಿ ಬೀಳಿಸುವಂತ ಘಟನೆ ನಡೆದಿದ್ದು ಹೈದ್ರಾಬಾದ್ ನಲ್ಲಿ. ಇದಕ್ಕೆ ಎಲ್ಲೆಡೆಯಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು.