ಇದೇ ಅವಧಿಯಲ್ಲಿ ನಾನೂ ಸಿಎಂ ಆಗ್ತೀನಿ ಎಂದ ಸಚಿವ ಉಮೇಶ ಕತ್ತಿ

251

ಪ್ರಜಾಸ್ತ್ರ ಸುದ್ದಿ

ಬಾಗಲಕೋಟೆ: ನಾನು ಇದೇ ಅವಧಿಯಲ್ಲಿ ಸಿಎಂ ಆಗ್ತೀನಿ ಎಂದು ಹೇಳುವ ಮೂಲಕ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಹೊಸ ಬಾಂಬ್ ಸಿಡಿಸಿದ್ದಾರೆ. 75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ಮಾಡಿದ ಸಚಿವ ಕತ್ತಿ, ಜೀವಂತವಾಗಿದ್ದರೆ ಇದೆ ಅವಧಿಯಲ್ಲಿ ಸಿಎಂ ಆಗುತ್ತೇನೆ. ಇಲ್ಲದಿದ್ರೆ ಮುಂದಿನ ಅವಧಿಯಲ್ಲಿ ಆಗುತ್ತೇನೆ ಎಂದಿದ್ದಾರೆ.

ನಾನು ಹಿರಿಯನಿದ್ದೇನೆ. ಸಾಕಷ್ಟು ಅನುಭವ ಇದೆ. ಹೀಗಾಗಿ ಜೀವಂತ ಇದ್ದರೆ ಇದೆ ಅವಧಿಯಲ್ಲಿ ಸತ್ತರೆ ಮುಂದಿನ ಅವಧಿಯಲ್ಲಿ ಸಿಎಂ ಆಗುತ್ತೇನೆ ಎಂದು ಹೇಳುವ ಮೂಲಕ, ಸಿಎಂ ಬಸವರಾಜ ಬೊಮ್ಮಾಯಿ ಕುರ್ಚಿ ಸುರಕ್ಷಿತ ಅಲ್ಲ ಅನ್ನೋದನ್ನ ಪರೋಕ್ಷವಾಗಿ ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!