ಪ್ರಜಾಸ್ತ್ರ ಸುದ್ದಿ
ಕುಷ್ಟಗಿ: ಗಂಡನ ಅಕ್ರಮ ಸಂಬಂಧದ ಬಗ್ಗೆ ಪತ್ನಿ ಪ್ರಶ್ನೆ ಮಾಡಿದ್ದಕ್ಕೆ ಪತಿ ಹಾಗೂ ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮಾಲಗಿತ್ತಿ ಗ್ರಾಮದಲ್ಲಿ ನಡೆದಿದೆ. ಪೀರಸಾಬ್ ನದಾಫ್ ಹಾಗೂ ಶಾರವ್ವ ಶರಣಪ್ಪ ಬಸಾಪೂರ ಆತ್ಮಹತ್ಯೆ ಮಾಡಿಕೊಂಡ ಜೋಡಿ.
ಪೀರಸಾಬ್ ಹಾಗೂ ಶಾರವ್ವ ಅಕ್ರಮ ಸಂಬಂಧ ಆತನ ಪತ್ನಿಗೆ ಗೊತ್ತಾಗಿದೆ. ಇದೆ ವಿಚಾರಕ್ಕೆ ಜಗಳವಾಗಿದೆ. ಈ ಕುರಿತು ಊರಿನ ಹಿರಿಯರ ಮುಂದೆ ಪ್ರಸ್ತಾಪ ಮಾಡಿದ್ದಾಳೆ. ಗ್ರಾಮದ ಮುಖಂಡರು ಬುಧವಾರ ಮುಂಜಾನೆ ಪ್ರಕರಣ ಇತ್ಯರ್ಥ ಮಾಡುವುದಾಗಿ ಹೇಳಿದ್ದಾರೆ. ಈಗ ನೋಡಿದವರೆ ಅವರಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕ್ರಿಮಿನಾಶಕ ಸೇವಿಸಿ ಜಮೀನುವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹನುಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.