ಪ್ರಜಾಸ್ತ್ರ ಸುದ್ದಿ
ಉತ್ತರಾಖಂಡ: ಗಂಗಾ ನದಿಗೆ ತಮ್ಮ ಪದಕಗಳನ್ನು ವಿಸರ್ಜನೆ ಮಾಡಲು ಹೊರಟಿರುವ ಕುಸ್ತಿಪಟುಗಳು ಹರಿದ್ವಾರ ತಲುಪಿದ್ದಾರೆ. ಈ ವೇಳೆ ಗಂಗಾ ನದಿ ಕಮಿಟಿ ಮೆಡಲ್ ವಿಸರ್ಜನೆ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದೆ. ಹೀಗಾಗಿ ಸರ್ಕಾರಕ್ಕೆ ಐದು ದಿನಗಳ ಗಡುವು ನೀಡಿದೆ.
ಕ್ರೀಡಾಪಟುಗಳು ಗಂಗೆಯಲ್ಲಿ ಪದಕಗಳನ್ನು ಹರಿಬಿಡಲು ನಿರ್ಧರಿಸಿರುವುದು ದೊಡ್ಡ ಸಂಚಲನ ಮೂಡಿಸಿದೆ. ಹೀಗಾಗಿ ದೇಶ್ಯಾದ್ಯಂತ ಸಾಕಷ್ಟು ಕುತೂಹಲ ಮೂಡಿಸಿದೆ. ಇನ್ನು ಕುಸ್ತಿಪಟುಗಳ ಹೋರಾಟಕ್ಕೆ ವಿವಿಧ ಸಂಘಟನೆಗಳ ಬೆಂಬಲ ವ್ಯಕ್ತವಾಗುತ್ತಿದೆ. ದೇಶದಲ್ಲಿ ಇದು ಮತ್ತೊಂದು ರೀತಿ ಹೋರಾಟಕ್ಕೆ ನಾಂದಿ ಹಾಡಲಿದೆ.
ಕುಸ್ತಿ ಅಸೋಷಿಯನ್ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳದ ಗಂಭೀರ ಆರೋಪ ಕೇಳಿ ಬಂದಿದೆ. ಈ ಸಂಬಂಧ ಇದುವರೆಗೂ ಕೇಂದ್ರ ಸರ್ಕಾರದ ಯಾವ ಸಚಿವರು ಮಾತನಾಡಿಲ್ಲ. ಕ್ರೀಡಾ ಇಲಾಖೆಗೆ ಸಂಬಂಧಿಸಿದ ಸಚಿವರು ಸಹ ಈ ಕುರಿತು ಮಾತನಾಡಲು ಸಿದ್ಧರಿಲ್ಲ. ಇದರಿಂದಾಗಿ ಒಲಿಂಪಿಕ್ ಸೇರಿ ವಿಶ್ವ ಚಾಂಪಿಯನ್ ಟೂರ್ನಿಯಲ್ಲಿ ಪದಕ ಗೆದ್ದ ಸಾಕ್ಷಿ ಮಲಿಕ್, ಭಜರಂಗ್ ಪೂನಿಯಾ, ವಿನೇಶ್ ಪೊಗೆಟ್ ಸೇರಿ ಅನೇಕರು ಕಳೆದ 38 ದಿನಗಳಿಂದ ಹೋರಾಟ ಮಾಡುತ್ತಿದ್ದಾರೆ.
ಈಗ ತಾವು ಗೆದ್ದಿರುವ ಪ್ರತಿಷ್ಠಿತ ಒಲಿಂಪಿಕ್ ಪದಕಗಳನ್ನು ಸಹ ಗಂಗಾ ನದಿಯಲ್ಲಿ ವಿಸರ್ಜನೆ ಮಾಡಲು ಮುಂದಾಗಿರುವುದು ದೊಡ್ಡ ಆಂದೋಲನಕ್ಕೆ ಸಾಕ್ಷಿಯಾಗಲಿದೆ. ಈಗ್ಲಾದರೂ ಕೇಂದ್ರದ ಮೋದಿ ಸರ್ಕಾರ ತನ್ನ ಮೌನ ಮುರಿಯುತ್ತಾ ಕಾದು ನೋಡಬೇಕು.