ಪ್ರಜಾಸ್ತ್ರ ಸುದ್ದಿ
ಚೆನ್ನೈ: ಭಾರತ ಹಾಗೂ ಚೀನಾ ನಡುವೆ ಲಡಾಕ್ ಗಾಲ್ವನ್ ಪ್ರದೇಶದಲ್ಲಿ ನಡೆದ ಸೆಣಸಾಟದಲ್ಲಿ ಹುತಾತ್ಮರಾದ ತಮಿಳುನಾಡಿನ ಹವಾಲ್ದಾರ್ ಪಳನಿ ಕುಟುಂಬಕ್ಕೆ, 20 ಲಕ್ಷ ಪರಿಹಾರವನ್ನ ಘೋಷಣೆ ಮಾಡಲಾಗಿದೆ. ಇದರ ಜೊತೆಗೆ ಕುಟುಂಬದ ಒಬ್ಬರು ಸದಸ್ಯರಿಗೆ ವಿದ್ಯಾರ್ಹತೆ ಆಧಾರದ ಮೇಲೆ ಸರ್ಕಾರಿ ನೌಕರಿ ನೀಡುವುದಾಗಿ ಸಿಎಂ ಪಳನಿಸ್ವಾಮಿ ಹೇಳಿದ್ದಾರೆ.
ಹವಾಲ್ದಾರ್ ಪಳನಿ ಕಳೆದ 22 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸ್ತಿದ್ದಾರೆ. ಇವರಿಗೆ ಇಬ್ಬರು ಮಕ್ಕಳಿದ್ದು, ಮಗಳು 6ನೇ ತರಗತಿ ಹಾಗೂ ಮಗ 3ನೇ ತರಗತಿ ಓದುತ್ತಿದ್ದಾನೆ. ಯೋಧನ ಪತ್ನಿ ಪದವೀಧರೆಯಾಗಿದ್ದಾರೆ.
ತೆಲಂಗಾಣದ ಕರ್ನಲ್ ಸಂತೋಷ ಬಾಬು ಹಾಗೂ ಜಾರ್ಖಂಡನ ಓಜಾ ಸಹ ಹುತಾತ್ಮರಾಗಿದ್ದಾರೆ. ಐವರು ಚೀನಾ ಯೋಧರ ಹತ್ಯೆಯೊಂದಿಗೆ ದೇಶಕ್ಕಾಗಿ ಪ್ರಾಣವನ್ನ ಅರ್ಪಿಸಿದ ಮೂವರು ಯೋಧರಿಗೆ ಎಲ್ಲೆಡೆ ಶ್ರದ್ದಾಂಜಲಿ ಸಲ್ಲಿಸಲಾಗ್ತಿದೆ.