ಕಪುರ್ತಲ್: ಪಂಜಾಬ್ ಪೊಲೀಸ್ ಇಲಾಖೆಯ ಎಎಸ್ಐ ಯೊಬ್ಬರು ಮಾಡಿದ ಯಡವಟ್ಟಿನಿಂದ ಅಂತಾರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರ ಸಾವನ್ನಪ್ಪಿದ್ದಾನೆ. ಸಣ್ಣ ವಿಚಾರಕ್ಕೆ ಸರ್ವಿಸ್ ಗನ್ ನಿಂದ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ ಎನ್ನಲಾಗ್ತಿದೆ.
ಪೊಲೀಸಪ್ಪನ ದರ್ಪಕ್ಕೆ 24 ವರ್ಷದ ಅರ್ವಿಂದರ್ ಜಿತ್ ಸಿಂಗ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ರೆ, ಈತನ ಸ್ನೇಹಿತ ಪ್ರದೀಪ ಸಿಂಗ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಸಂಬಂಧ ಎಎಸ್ಐ ಪರಮ್ ಜಿತ್ ಸಿಂಗ್ ಹಾಗೂ ಆತನ ಸ್ನೇಹಿತನನ್ನ ಬಂಧಿಸಲಾಗಿದೆ.
ಕಳೆದ ರಾತ್ರಿ 9.30ರ ಸುಮಾರಿಗೆ ಎಸ್ ಯುವಿ ಕಾರನ್ನ ರಸ್ತೆ ಬದಿ ನಿಲ್ಲಿಸಿ ಅದರಲ್ಲಿ ಕುಳ್ತಿದ್ರು. ಐಎಸ್ಐ ಬಂದವರು ಇಲ್ಲಿ ಏಕೆ ಪಾರ್ಕ್ ಮಾಡಿದ್ದೀರಿ ಎಂದು ಕೇಳಿದ್ದಾರೆ. ಇದಕ್ಕೆ ಅವರು ಏನೂ ಉತ್ತರಿಸದೆ ಕಾರ್ ತೆಗೆದುಕೊಂಡು ಹೋಗಿದ್ದಾರೆ. ಬಳಿಕ ಎಎಸ್ಐ ಕಾರನ್ನ ಫಾಲೋ ಮಾಡಿದ್ದಾರೆ. ಇದನ್ನ ನೋಡಿ ಕಾರನ್ನ ನಿಲ್ಲಿಸಿ ಅದರಿಂದ ಇಳಿದು ತಿರುಗುವಷ್ಟರಲ್ಲಿ ಎಎಸ್ಐ ಸಹ ಕಾರನಿಂದ ಇಳಿದು ಗುಂಡು ಹಾರಿಸೇ ಬಿಟ್ಟಿದ್ದಾನೆ. ಹೀಗಾಗಿ ಅರ್ವಿಂದರ್ ಜಿತ್ ಸಿಂಗ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಒಂದು ಮೌನ, ಸಣ್ಣ ಅನುಮಾನಕ್ಕೆ ಭವಿಷ್ಯದ ಕಬಡ್ಡಿ ಸ್ಟಾರ್ ಜೀವ ಹೋಗಿದೆ.