ತಮ್ಮ ಬಂಗಲೆಯನ್ನ ಆಸ್ಪತ್ರೆ ಮಾಡಿಕೊಳ್ಳಿಯೆಂದ ಸೂಪರ್ ಸ್ಟಾರ್

597

ಕಾಲಿವುಡ್ ಸೂಪರ್ ಸ್ಟಾರ್ ಕಮಲ ಹಾಸನ್ ತಮ್ಮ ಭವ್ಯ ಬಂಗಲೆಯನ್ನ ತಾತ್ಕಾಲಿಕವಾಗಿ ಆಸ್ಪತ್ರೆಯಾಗಿ ಬಳಿಸಿಕೊಳ್ಳಬಹುದು ಎಂದು ಹೇಳಿದ್ದಾರೆ. ಹಿರಿಯ ನಟ ಹಾಗೂ ಮಕ್ಕಳ್ ನಿಧಿ ಮಯಂ ಪಕ್ಷದ ಸಂಸ್ಥಾಪಕರಾಗಿರುವ ಕಮಲ ಹಾಸನ್ ತಮಿಳು ಸರ್ಕಾರದ ಎದುರು ತಮ್ಮ ಇಂಗಿತವನ್ನ ವ್ಯಕ್ತಪಡಿಸಿದ್ದಾರೆ.

ಕಮಲ ಹಾಸನ್ ಹಾಗೂ ಕಿರಿಯ ಮಗಳು ಅಕ್ಷರಾ ಚೆನ್ನೈನ ಒಂದು ಮನೆಯಲ್ಲಿದ್ದಾರೆ. ಪತ್ನಿ ಹಾಗೂ ಹಿರಿಯ ಮಗಳು ಶ್ರುತಿ ಮುಂಬೈನಲ್ಲಿದ್ದಾರೆ. ಹೀಗಾಗಿ ತಮ್ಮದು ಇನ್ನೊಂದು ಬಂಗಲೆಯನ್ನ ಕರೋನಾ ಸೋಂಕಿತರ ಚಿಕಿತ್ಸೆಗಾಗಿ ತಾತ್ಕಾಲಿಕವಾಗಿ ಆಸ್ಪತ್ರೆಯನ್ನಾಗಿ ಮಾಡಿಕೊಳ್ಳಬಹುದು ಎಂದಿದ್ದಾರೆ.

ಇನ್ನು ಇದರ ಜೊತೆ ಸಿನಿಮಾ ಕಾರ್ಮಿಕರಿಗಾಗಿ 10 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಹೀಗೆ ಸಿನಿ ರಂಗದವರು ತಮ್ಮ ಕೈಲಾದ ಸಹಾಯ ಮಾಡ್ತಿರುವುದು ಒಳ್ಳೆಯ ಲಕ್ಷಣ. ಕಮಲ ಹಾಸನ್ ನಡೆ ಎಲ್ಲರ ಮೆಚ್ಚುಗೆ ಪಡೆದಿದೆ.




Leave a Reply

Your email address will not be published. Required fields are marked *

error: Content is protected !!