ಪ್ರಜಾಸ್ತ್ರ ಸುದ್ದಿ
ತಿರುಚ್ಚಿ: ತಮಿಳುನಾಡು ವಿಧಾನಸಭೆಗೆ 2021ರಲ್ಲಿ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಲು ಮಕ್ಕಳ್ ನೀಧಿ ಮೈಯ್ಯಮ್ ಪಕ್ಷ ಭರ್ಜರಿ ತಯಾರಿ ನಡೆಸಿದೆ. ಪಕ್ಷದ ಸಂಸ್ಥಾಪಕ ಹಾಗೂ ಮುಖ್ಯಸ್ಥ, ನಟ ಕಮಲ್ ಹಾಸನ್ ಸರ್ಕಾರಿ ಕಚೇರಿಗಳ ಭ್ರಷ್ಟಾಚಾರ ಪಟ್ಟಿ ರಿಲೀಸ್ ಮಾಡಿದ್ದಾರೆ.
ಸರ್ಕಾರಿ ಕಚೇರಿಯಲ್ಲಿ ಸಿಗುವ ವಿವಿಧ ಸೇವೆಗಳಿಗೆ ಪಡೆಯುತ್ತಿರುವ ಲಂಚದ ಪಟ್ಟಿಯನ್ನ ಸುದ್ದಿಗೋಷ್ಠಿ ವೇಳೆ ಬಿಡುಗಡೆ ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ 3ನೇ ಮೈತ್ರಿಯಾದ್ರೆ ಕಮಲ್ ಹಾಸನ್ ಸಿಎಂ ಆಗಲಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಮುರುಗನ್ ತಿಳಿಸಿದ್ದಾರೆ.
ತಿರುಚ್ಚಿ ನಗರದ ವಿವಿಧ ಭಾಗಗಳಲ್ಲಿ ಪ್ರಚಾರ ನಡೆಸಿದ ಕಮಲ್ ಹಾಸನ್, ಕಳೆದ 50 ವರ್ಷಗಳಿಂದ ದ್ರಾವಿಡ್ ಆಳ್ವಿಕೆಯಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದನ್ನು ಹೆಚ್ಚಿಗೆ ನೋಡಿದ್ದೇವೆ. ಮಕ್ಕಳ್ ನೀದಿ ಮಯ್ಯಮ್ ದ್ರಾವಿಡ್ ಪಕ್ಷವಾಗಿದ್ದು, ತಮಿಳು ಮಾತ್ನಾಡುವವರೆಲ್ಲ ದ್ರಾವಿಡರು ಎನ್ನುವ ಮೂಲಕ, ತಮ್ಗೆ ಬೆಂಬಲ ನೀಡಬೇಕು ಎಂದು ಕೇಳಿಕೊಂಡಿದ್ದಾರೆ.