ಅಣ್ತಮ್ಮರ ನಡುವೆ ಸ್ಪರ್ಧೆ.. ಯಾರಿಗೆ ಮುನ್ನಡೆ ಗೊತ್ತಾ?

158

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ 224 ಕ್ಷೇತ್ರಗಳ ಕಣದಲ್ಲಿ ಹಲವು ಕ್ಷೇತ್ರಗಳು ಅಣ್ಣ ಹಾಗೂ ತಮ್ಮರ ನಡುವೆ ಸ್ಪರ್ಧೆ ನಡೆದಿದ್ದು, ಯಾವ ಕ್ಷೇತ್ರದಲ್ಲಿ ಯಾರಿಗೆ ಮುನ್ನಡೆ ಅನ್ನೋದು ಇಲ್ಲಿದೆ ನೋಡಿ.

ಜೇವರ್ಗಿಯಲ್ಲಿ ಮಾಜಿ ಸಿಎಂ ದಿ.ಧರ್ಮಸಿಂಗ್ ಅವರ ಪುತ್ರರಾದ ಅಜಯ್ ಸಿಂಗ್, ವಿಜಯ್ ಸಿಂಗ್ ಕಣದಲ್ಲಿದ್ದಾರೆ. ಜೇವರ್ಗಿಯಲ್ಲಿ ಅಜಯ್ ಸಿಂಗ್, ಬಸವ ಕಲ್ಯಾಣದಲ್ಲಿ ವಿಜಯ್ ಸಿಂಗ್ ಇದ್ದಾರೆ. ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ, ದಿವಂಗತ ಬಂಗಾರಪ್ಪನವರ ಮಕ್ಕಳಾದ ಮಧು ಹಾಗೂ ಕುಮಾರ ಬಂಗಾರಪ್ಪ ಕಣದಲ್ಲಿದ್ದಾರೆ. ಮಧು ಕಾಂಗ್ರೆಸ್ಸಿನಿಂದ, ಕುಮಾರ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ.

ಇನ್ನು ಬೆಳಗಾವಿಯಲ್ಲಿ ಜಾರಕಿಹೊಳಿ ಬ್ರದರ್ಸ್ ಕಣದಲ್ಲಿದ್ದಾರೆ. ಯಮಕನಮರಡಿಯಲ್ಲಿ ಕಾಂಗ್ರೆಸ್ಸಿನಿಂದ ಸತೀಶ್ ಜಾರಕಿಹೊಳಿ, ಗೋಕಾಕನಲ್ಲಿ ಬಿಜೆಪಿಯಿಂದ ರಮೇಶ ಭೂಸನೂರ, ಅರಭಾವಿ ಕ್ಷೇತ್ರದಲ್ಲಿ ಬಾಲಚಂದ್ರ ಜಾರಕಿಹೊಳಿ ಕಣದಲ್ಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!