ಕನ್ನಡಿಗ ಕೆ.ಎಲ್ ರಾಹುಲ ಟೀಂ ಇಂಡಿಯಾದಲ್ಲಿ ಚಾನ್ಸ್ ಗಿಟ್ಟಿಸಿಕೊಂಡು ಚೆನ್ನಾಗಿ ಆಡ್ತಿದ್ರು. ಆದ್ರೆ, ಇತ್ತೀಚೆಗೆ ಸತತ ವೈಪಲ್ಯದಿಂದ ಇದೀಗ ಟೀಂ ಇಂಡಿಯಾದಿಂದ ಅವಕಾಶ ಕಳೆದುಕೊಂಡಿದ್ದಾರೆ. ವರ್ಲ್ಡ್ ಕಪ್ ನಲ್ಲಿ ಒಂದಿಷ್ಟು ಭರವಸೆ ಮೂಡಿಸಿದ್ದ ಕೆ.ಎಲ್ ರಾಹುಲ ವೆಸ್ಟ್ ಇಂಡೀಸ್ ಟೂರಿನಲ್ಲಿ ಹೇಳಿಕೊಳ್ಳುವ ಪ್ರದರ್ಶನ ನೀಡ್ಲಿಲ್ಲ.
ಇದೀಗ ತವರು ನೆಲದಲ್ಲಿ ಸೌಥ್ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೂರು ಟೆಸ್ಟ್ ಪಂದ್ಯಗಳಲ್ಲಿ ಚಾನ್ಸ್ ಇಲ್ಲ. ಆರಂಭಿಕ ಆಟಗಾರನಾಗಿ ರೋಹಿತ ಶರ್ಮಾ ಆಯ್ಕೆ ಆಗಿದ್ದಾರೆ. ಏಕದಿನ ಪಂದ್ಯಕ್ಕೆ ಶಿಖರ ಧವನ ಮರಳಿದ್ದಾರೆ. ಹೀಗಾಗಿ ಅಲ್ಲೂ ಚಾನ್ಸ್ ಇಲ್ಲ. ಇನ್ನು ಟಿ-20 ಟೀಂನಲ್ಲಿ ಕಾಣಿಸಿಕೊಂಡಿದ್ರೂ ಮೈದಾನಕ್ಕೆ ಇಳಿಯಲಿಲ್ಲ.
ಟೀಂ ಇಂಡಿಯಾದಲ್ಲಿ ಕನ್ನಡದ ಆಟಗಾರವೆಂದು ಹೇಳಿಕೊಳ್ಳಲು ಸದ್ಯ ಇದ್ದಿದ್ದು ಕೆ.ಎಲ್ ರಾಹುಲ, ವರ್ಲ್ಡ್ ಕಪ್ ಟೈಂನಲ್ಲಿ ಭಾರತ ತಂಡ ಸೇರಿದ ಮಯಾಂಕ ಅಗರ್ವಾಲ್. ಆದ್ರೆ, ಈ ಇಬ್ಬರು ವೆಸ್ಟ್ ಇಂಡೀಸ್ ಟೂರಿನಲ್ಲಿ ಆರಂಭಿಕ ಜೋಡಿಯಾಗಿ ಕಣಕ್ಕೆ ಇಳಿದಿದ್ರೂ ಉತ್ತಮ ಪ್ರದರ್ಶನ ಬರ್ಲಿಲ್ಲ. ಅದಕ್ಕೆ ಇದೀಗ ಬೆಲೆ ತೆತ್ತಿದ್ದಾರೆ. ರಾಹುಲ ಆದಷ್ಟು ಬೇಗ ಟೀಂ ಇಂಡಿಯಾಗೆ ಮರಳಿಲಿ ಅನ್ನೋದು ಕನ್ನಡಿಗರ ಆಶಯ.