ಪ್ರಜಾಸ್ತ್ರ ಸುದ್ದಿ
ಕೋಯಿಕ್ಕೋಡ್: ನಿನ್ನೆ ರಾತ್ರಿ ಸಂಭವಿಸಿದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ಸಾವಿನ ಸಂಖ್ಯೆ ಈಗ 18ಕ್ಕೆ ಏರಿಕೆಯಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, 17 ಮಂದಿಯ ಗುರುತು ಪತ್ತೆ ಹಚ್ಚಲಾಗಿದೆ.
ದುಬೈನಿಂದ ಬಂದ ವಿಮಾನ ಕೋಯಿಕ್ಕೋಡ್ ಇಂಟರ್ ನ್ಯಾಷನಲ್ ಏರ್ ಪೋರ್ಟ್ ನಲ್ಲಿ ಲ್ಯಾಡಿಂಗ್ ಆದಾಗ ರನ್ ವೇಯಿಂದ ಜಾರಿ ಪಕ್ಕದ ಕಣಿವೆಗೆ ಬಿದ್ದು ಈ ಅನಾಹುತ ಸಂಭವಿಸಿದೆ. ಪೈಲೆಟ್ ದೀಪಕ ಸಾಠೆ, ಸಹಪೈಲೆಟ್ ಅಖಿಲೇಶಕುಮಾರ ಸೇರಿ 17 ಮಂದಿ ಸಾವನ್ನಪ್ಪಿದ್ರು.
ಘಟನೆಯಲ್ಲಿ ನಾಲ್ವರು ಸುರಕ್ಷಿತವಾಗಿದ್ದು, ಅವರಿಗೆ ಸಣ್ಣಪುಟ್ಟ ಗಾಯಗಳಾದ ಪರಿಣಾಮ ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಈಗಾಗ್ಲೇ ಕೇಂದ್ರ ತಂಡ ಭೇಟಿ ನೀಡಿದೆ.