ಕಾವೇರಿಗೆ ಬಾಗಿನ: ಅಶ್ಲೀಲ ಪೋಸ್ಟ್ ಹಾಕಿದವರ ವಿರುದ್ಧ ಎಫ್ಐಆರ್

914

ಪ್ರಜಾಸ್ತ್ರ ಸುದ್ದಿ

ಮಂಡ್ಯ: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಮಂಡ್ಯ ಸಂಸದೆ ಸುಮಲತಾ ಅಂಬರೀಶ ಸೇರಿದಂತೆ ಜಿಲ್ಲೆಯ ಗಣ್ಯರು ಕೆಆರ್ ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದಾರೆ. ಕಳೆದ ಶುಕ್ರವಾರ ಗೌರಿ ಹಬ್ಬದಂದು ವಾಡಿಕೆಯಂತೆ ಕಾವೇರಿಗೆ ಬಾಗಿನ ಅರ್ಪಿಸಲಾಗಿದೆ.

ಬಾಗಿನ ಅರ್ಪಿಸಿದ ವಿಡಿಯೋ ಜೊತೆಗೆ ಅಶ್ಲೀಲವಾಗಿ ಸಂದೇಶ ಬರೆದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ. ಈ ಸಂಬಂಧ ಅಖಿಲ ಕರ್ನಾಟಕ ಅಂಬರೀಶ ಅಭಿಮಾನಿಗಳ ಸಂಘದ ರಾಜ್ಯ ಘಟಕದ ಅಧ್ಯಕ್ಷರು ನೀಡಿದ ದೂರಿನ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.

ಎಚ್.ಜಿ ಹರೀಶ, ಕರ್ನಾಟಕ ಜೆಡಿಎಸ್ ಖಾತೆ ಬಳಕೆದಾರ ಆರ್.ಇ ಸಹೀದ, ಸುರೇಂದ್ರ ಶ್ರೀನಿವಾಸಗೌಡ, ಫ್ರೈಡ್ ಆಫ್ ಯುಕೆ ಖಾತೆಯ ಮಾಲೀಕನ ವಿರುದ್ಧ ದೂರು ದಾಖಲಾಗಿದೆ. ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ, ಅದನ್ನ ಶೇರ್ ಮಾಡಿಕೊಂಡವರಿಗೆ ನೋಟಿಸ್ ಕಳಿಸಲಾಗುವುದು ಹಾಗೂ ಶ್ರೀಘ್ರದಲ್ಲಿ ಬಂಧಿಸಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!