ಪ್ರಜಾಸ್ತ್ರ ಸುದ್ದಿ
ವಿಜಯಪುರ: ಕೆಎಸ್ಆರ್ ಟಿಸಿ ಹಾಗೂ ಕಾರ್ ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಹುನಗುಂದ ತಾಲೂಕಿನ ಧನ್ನೂರು ಕ್ರಾಸ್ ಹತ್ತಿರ ನಡೆದಿದೆ. ಮುದ್ದೇಬಿಹಾಳ ಮೂಲದ ಹಾಜಿಸಾಬ್ ಬಾಗವಾನ್(50) ಹಾಗೂ ಪರಶುರಾಮ ಕಟ್ಟಿ(45) ಮೃತ ದುರ್ದೈವಿಗಳು.
ಕೆಎಸ್ಆರ್ ಟಿಸಿ ಹಾಗೂ ಇಳಕಲ್ ಕಡೆ ಹೊರಟಿದ್ದ ಕಿಯಾ ಕಾರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಈ ದುರಂತ ನಡೆದಿದೆ. ಕಾರು ಚಾಲಕ ರಾಜು ಚವ್ಹಾಣ(45) ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ತೀವ್ರಕ್ಕೆ ಕಾರು ಹಾಗೂ ಬಸ್ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಹುನಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.