ಭೀಕರ ಅಪಘಾತದಲ್ಲಿ 9 ಪ್ರಯಾಣಿಕರ ಸಾವು

195

ಪ್ರಜಾಸ್ತ್ರ ಸುದ್ದಿ

ಪಾಲಕ್ಕಾಡ್: ಕಳೆದ ರಾತ್ರಿ ಕೇರಳದ ಮಂಗಳಂ ಹತ್ತಿರ ಕೇರಳ ಸಾರಿಗೆ ಬಸ್ ಹಾಗೂ ಖಾಸಗಿ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿ 9 ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ. ಹಲವರು ಗಾಯಗೊಂಡಿದ್ದಾರೆ.

ಟೂರಿಸ್ಟ್ ಬಸ್ ನಲ್ಲಿ 42 ವಿದ್ಯಾರ್ಥಿಗಳು, ಕೇರಳ ಸಾರಿಗೆ ಸಂಸ್ಥೆಯ ಬಸ್ ನಲ್ಲಿ 49 ಜನರಿದ್ದರು. ಅಪಘಾತದಲ್ಲಿ 9 ಜನರ ಸಾವನ್ನಪ್ಪಿದ್ದು ಗಾಯಗೊಂಡ 50 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅನೂಪ್, ರೋಹಿತ್, ದೀಪು ಕೆಎಸ್ಆರ್ ಟಿಸಿ ಬಸ್ ನಲ್ಲಿದ್ದ ಪ್ರಯಾಣಿಕರು, ಶಾಲಾ ಶಿಕ್ಷಕಿ ವಿಷ್ಣು ವಿ.ಕೆ, ವಿದ್ಯಾರ್ಥಿಗಳಾದ ಅಂಜನಾ, ಅಜಿತ್, ದಿಯಾ ರಾಜೇಶ್, ಕ್ರಿಸ್ ಥಾಮಸ್, ಇಮ್ಯಾನುಯೆಲ್, ಎಲ್ನಾ ಜೋಸ್ ಟೂರಿಸ್ಟ್ ಬಸ್ ನಲ್ಲಿದ್ದವರು. ಇವರೆಲ್ಲ ಮೃತಪಟ್ಟ ದುರ್ದೈವಿಗಳು.




Leave a Reply

Your email address will not be published. Required fields are marked *

error: Content is protected !!