ಪ್ರಜಾಸ್ತ್ರ ಸುದ್ದಿ
ಸಿಂದಗಿ: ನಗರದ ವಿದ್ಯಾನಗರ 4ನೇ ಕ್ರಾಸ್ ಹತ್ತಿರ ಇರುವ ಸ್ಲಂ ಬಡಾವಣೆಯಲ್ಲಿ ಗುರು ಮಹಾಶಿವಶರಣ ಮಾದರ ಚನ್ನಯ್ಯ ಜಯಂತ್ಯೋತ್ಸವ ಆಚರಣೆ ಮಾಡಲಾಯಿತು.
ಶ್ರಾವಣ ಮಾಸದ ಹಿನ್ನೆಲೆಯಲ್ಲಿ ನಡೆದ ಜಯಂತ್ಯೋತ್ಸವದಲ್ಲಿ ಜೆಡಿಎಸ್ ಮುಖಂಡ ಶಿವಾನಂದ ಪಾಟೀಲ, ಕ್ರಾಂತಿಕಾರಿ ವೀರ ಸಾವರ್ಕರ್ ಯುವ ಬ್ರಿಗೇಡ್ ರಾಜ್ಯಾಧ್ಯಕ್ಷ ವಿನೋದ ಬಡಿಗೇರ, ಮಾದರ ಚನ್ನಯ್ಯ ಸಂಘದ ಅಧ್ಯಕ್ಷ ಗಂಗಾಧರ ಮಳ್ಳಿ ಕಾರ್ಯಕ್ರಮ ಉದ್ಘಾಟಿಸಿದರು.
ಈ ವೇಳೆ ಮಾದಿಗ ಸಮುದಾಯದ ಮುಖಂಡರಾದ ಪರಶುರಾಮ ಬನ್ನೆಟ್ಟಿ, ಏಕನಾಥ ದ್ವಾಶಾಳ, ಪರಶುರಾಮ ಓತಿಹಾಳ, ರಾಮಚಂದ್ರ ಪುರದಾಳ, ಮುಕೇಶ ಬಡಿಗೇರ ಸೇರಿದಂತೆ ಅನೇಕರು ಭಾಗವಹಿಸಿದ್ದರು.