ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಧ್ಯ ದೊಡ್ಡ ಚರ್ಚೆಯಲ್ಲಿರುವುದು ಸಿಎಂ ಬದಲಾವಣೆ ವಿಚಾರ. ಯಡಿಯೂರಪ್ಪನವರನ್ನೇ ಬದಲಾವಣೆ ಮಾಡಿರುವ ಬಿಜೆಪಿ ಹೈಕಮಾಂಡ್ ಬೊಮ್ಮಾಯಿ ಅವರನ್ನು ಬದಲಾವಣೆ ಮಾಡುತ್ತಿದೆ ಅನ್ನೋ ಚರ್ಚೆ ನಡೆದಿದ್ದು, ಈ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿದ್ದು, ನಾಯಕತ್ವ ಬದಲಾವಣೆ ಚರ್ಚೆಯಲ್ಲಿ ಸತ್ಯಾಂಶವಿಲ್ಲ. ಅಂತಹ ಯಾವುದೇ ಚರ್ಚೆ ಬಿಜೆಪಿಯಲ್ಲಿ ನಡೆದಿಲ್ಲ ಎಂದಿದ್ದಾರೆ.
ರಾಜ್ಯ ಬಿಜೆಪಿಯಲ್ಲಾಗಲಿ, ಹೈಕಮಾಂಡ್ ನಲ್ಲಿ ಸಿಎಂ ಬದಲಾವಣೆ ಚಿಂತನೆ ನಡೆದಿಲ್ಲ. ಕೇವಲ ಇದು ವದಂತಿ. ಬಸವರಾಜ್ ಬೊಮ್ಮಾಯಿ ಅವರೆ ಪೂರ್ಣಾವಧಿವರೆಗೂ ಮುಖ್ಯಮಂತ್ರಿಯಾಗಿರಲಿದ್ದಾರೆ. ಈ ಚರ್ಚೆಯನ್ನು ಇಲ್ಲಿಗೆ ನಿಲ್ಲಿಸಿ ಎಂದರು.