ಭೋಪಾಲ್: ಗಣೇಶ ವಿಸರ್ಜನೆ ವೇಳೆ 11 ಜನ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ. ವಿಸರ್ಜನೆ ವೇಳೆ ನದಿಯಲ್ಲಿ ದೋಣಿ ಮುಳುಗಿ 11 ಜನ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಹೆಚ್ಚಿಗೆ ಆಗುವ ಸಾಧ್ಯತೆಯಿದೆ ಎನ್ನಲಾಗ್ತಿದೆ.
ಭೋಪಾಲ್ ಹತ್ತಿರದ ಕತ್ಲಾಪುರ ಎಂಬಲ್ಲಿ ಈ ದುರ್ಘಟನೆ ನಡೆದಿದೆ. ಈ ವೇಳೆ 6 ಜನರನ್ನ ಎನ್ ಡಿಆರ್ ಎಫ್ ತಂಡ ರಕ್ಷಣೆ ಮಾಡಿದೆ. ಎರಡು ದೋಣಿಯಲ್ಲಿ ಗಣೇಶನನ್ನ ತೆಗೆದುಕೊಂಡು ಹೋದಾಗ ಈ ಘಟನೆ ನಡೆದಿದೆ. ಇದರಲ್ಲಿ ಎಷ್ಟು ಜನರಿದ್ರು ಅನ್ನೋದು ಇನ್ನು ತಿಳಿದಿಲ್ಲ.
ಮಧ್ಯಪ್ರದೇಶದ ಸಿಎಂ ಕಮಲನಾಥ ದೋಣಿ ಮುಳುಗಿ ಸಾವನ್ನಪ್ಪಿದ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ ಘೋಷಣೆ ಮಾಡಿದ್ದಾರೆ. ಇನ್ನು ನಾಪತ್ತೆಯಾದ ದೋಣಿಯ ಹುಡುಕಾಟವನ್ನ ಎನ್ ಡಿಆರ್ ಎಫ್ ತಂಡ ನಡೆಸಿದೆ.