ಕೇಸರಿ ನಾಯಕರ ವಿರುದ್ಧ ದೀದಿ ವಾಗ್ದಾಳಿ

717

ಕೋಲ್ಕತ್ತಾ: ಬಿಜೆಪಿ ಹಾಗೂ ಟಿಎಂಸಿ ನಡುವಿನ ಜಿದ್ದಾಜಿದ್ದಿ ಇನ್ನೂ ಮುಗಿದಿಲ್ಲ. ಚುನಾವಣೆ ಬಳಿಕವೂ ಅದು ನಿಂತಿಲ್ಲ. ಹೀಗಾಗಿ ರಂಜಾನ್ ಟೈಂನಲ್ಲಿಯೂ ದೀದಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕೋಲ್ಕತ್ತಾದಲ್ಲಿ ರೆಡ್ ರೋಡ್ ನಲ್ಲಿ ನಡೆದ ಈದುಲ್ ಫಿತ್ರ್ ಸಾಮೂಹಿಕ ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮಾತ್ನಾಡಿದ್ದು, ನಮ್ಮನ್ನ ಕೆಣಕಲು ಬಂದವರು ಸರ್ವನಾಶವಾಗ್ತಾರಂತೆ. ನಮ್ಮ ಜೊತೆ ಯಾರು ಗುದ್ದಾಟ ನಡೆಸಲು ಬರುತ್ತಾರೋ ಅವರು ನಾಶವಾಗ್ತಾರೆ ಅಂತಾ ಹೇಳಿದ್ದಾರೆ.

ಜೈ ಶ್ರೀರಾಮ್ ಘೋಷಣೆ ಮೂಲಕ ದೀದಿಯನ್ನ ಕೆಣಕುತ್ತಿರುವ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು. ಹಿಂದೂಗಳು ತ್ಯಾಗಕ್ಕೆ, ಮುಸ್ಲಿಂರು ಗೌರವಕ್ಕೆ ಕ್ರೈಸ್ತ್ ರು ಪ್ರೀತಿಗೆ, ಸಿಖ್ಕರು ಬಲಿದಾನಕ್ಕೆ ಹೆಸರಾಗಿದ್ದಾರೆ. ಇದು ನಮ್ಮ ಹಿಂದೂಸ್ಥಾನ. ಇದನ್ನ ನಾವು ರಕ್ಷಣೆ ಮಾಡುತ್ತೇವೆ ಅಂತಾ ಹೇಳಿದ್ದಾರೆ.


TAG


Leave a Reply

Your email address will not be published. Required fields are marked *

error: Content is protected !!