ಪ್ರಜಾಸ್ತ್ರ ಸುದ್ದಿ
ಕಾಸರಗೋಡು: ಮಂಗಲಪಾಡಿಯ ಮಜೇಶ್ವರಂನಲ್ಲಿ ಶಾಲೆಯಿಂದ ಮನೆಗೆ ಹೊರಟಿದ್ದ ಬಾಲಕಿಯನ್ನು ಎತ್ತಿ ಬಿಸಾಕಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಬೂಬಕರ್ ಸಿದ್ದಿಕಿ ಬಂಧಿತ ಆರೋಪಿಯಾಗಿದ್ದಾನೆ.
ಶಾಲೆಯಿಂದ ಮನೆಗೆ ಹೊರಡಲು ಕುಟುಂಬಸ್ಥರಿಗೆ ಕಾಯುತ್ತಿದ್ದ ಬಾಲಕಿಯ ಹತ್ತಿರ ಸಾಮಾನ್ಯರಂತೆ ಬಂದ ವ್ಯಕ್ತಿ ಹೊಡೆದು ಎತ್ತಿ ಬಿಸಾಕಿದ್ದ. ಇದರಿಂದ ಬಾಲಕಿ ಸಾಕಷ್ಟು ಭಯಗೊಂಡಿದ್ದಳು. ಕುಟುಂಬಸ್ಥರು ಹೇಳಿದ ಬಳಿಕ ಸಾಕಷ್ಟು ಕಷ್ಟಪಟ್ಟು ಬಾಲಕಿ ನಡೆದ ಘಟನೆ ಹೇಳಿದ್ದಳು. ಸಿಸಿಟಿವಿಯಲ್ಲಿ ಈ ದೃಶ್ಯ ರೆಕಾರ್ಡ್ ಆಗಿತ್ತು. ನಂತರ ವೈರಲ್ ಆಗಿ ಆಕ್ರೋಶ ವ್ಯಕ್ತವಾಗಿತ್ತು.
ಬಂಧಿತ ಅಬೂಬಕರ್ ಸಿದ್ದಿಕಿ ಡ್ರಗ್ಸ್ ವ್ಯಸನಿ ಎಂದು ಹೇಳಲಾಗುತ್ತಿದೆ. ಪೋಕ್ಸೋ ಹಾಗೂ ಹತ್ಯೆ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.