ಬೆಂಗಳೂರು: ಮಂಗಳೂರು ನಗರದ ಬಜ್ಪೆ ವಿಮಾನ ನಿಲ್ದಾಣದಲ್ಲಿ ಬಾಂಬ್ ಬ್ಯಾಗ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಆರೋಪಿ ಆದಿತ್ಯರಾವ ಶರಣಾಗತಿಯಾಗಿದ್ದಾನೆ. ಉಡುಪಿಯ ಮಣಿಪಾಲ ನಿವಾಸಿ 40 ವರ್ಷದ ಆದಿತ್ಯರಾವ ಬೆಂಗಳೂರು ಪೊಲೀಸರಿಗೆ ಶರಣಾಗತಿಯಾಗಿದ್ದಾನೆ ಅನ್ನೋ ಮಾಹಿತಿ ಸಿಕ್ಕಿದೆ.
ಶಂಕಿತ ಆರೋಪಿ 2018ರಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣ, ಮೆಜೆಸ್ಟಿಕ್ ಬಳಿಯಿರುವ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣವನ್ನ ಸ್ಪೋಟಿಸುವುದಾಗಿ ಬೆದರಿಕೆ ಕರೆ ಮಾಡಿದ್ದ. ಆಗ ಈತನನ್ನ ಬಂಧಿಸಲಾಗಿತ್ತು. ಶಂಕಿತ ಆರೋಪಿ ಆದಿತ್ಯರಾವ ಮೂರು ಬಾರಿ ಹುಸಿ ಬೆದರಿಕೆ ಕರೆಗಳನ್ನ ಮಾಡಿದ್ದ. ಇದಕ್ಕಾಗಿ ಒಂದಿಷ್ಟು ಕಾಲ ಜೈಲುವಾಸ ಸಹ ಅನುಭವಿಸಿ ಬಂದಿದ್ದ.