ರಾಜೀನಾಮೆಗೆ ಈಶ್ವರಪ್ಪ ಸಿದ್ಧ?

377

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ದ ಪ್ರಧಾನಿ, ಗವರ್ನರ್ ಗೆ ದೂರು ನೀಡಿದ ಬಳಿಕ, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ರಾಜೀನಾಮೆ ಮುಂದಾಗಿದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಿವೆ.

ಶುಕ್ರವಾರ ಮತ್ತೊಂದು ದಾಳ ಉರುಳಿಸಿ ಈಶ್ವರಪ್ಪ ರಾಜೀನಾಮೆ ಸಲ್ಲಿಸ್ತಾರಾ ಅನ್ನೋ ಪ್ರಶ್ನೆ ಮೂಡಿದೆ. ಆದ್ರೆ, ಪಕ್ಷದ ಮುಖಂಡರು ಈಶ್ವರಪ್ಪ ಮನವೊಲಿಸುವ ಕೆಲಸ ಮಾಡ್ತಿದ್ದಾರಂತೆ. ಆದ್ರೆ, ಅವರು ಮಾತ್ರ ರಾಜೀನಾಮೆ ನೀಡುವುದು ಫಿಕ್ಸ್ ಅಂತಾ ಹೇಳಲಾಗ್ತಿದೆ.

ತಾವು ತಡೆ ಹಿಡಿದ ಅನುದಾನದ ಕಡತವನ್ನ, ಯಾವುದೆ ಕಾರಣಕ್ಕೂ ತಮ್ಮ ಅನುಮೋದನೆ ಗ್ರೀನ್ ಸಿಗ್ನಲ್ ನೀಡಲು ಈಶ್ವರಪ್ಪ ಒಪ್ಪುತ್ತಿಲ್ಲ. ಹೀಗಾಗಿ ಸಚಿವ ಕೆ.ಎಸ್ ಈಶ್ವರಪ್ಪ ಲೆಟರ್ ಬಾಂಬ್ ಬಳಿಕ ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಬಿರುಗಾಳಿ ಎದ್ದಿದೆ.




Leave a Reply

Your email address will not be published. Required fields are marked *

error: Content is protected !!