ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಮೇಶ ಜಾರಕಿಹೊಳಿ ಸಿಡಿ ಕೇಸಿನಿಂದ ಈಗಾಗ್ಲೇ ಸಾಕಷ್ಟು ಹೈರಾಣಾಗಿ ಹೋಗಿರುವ ರಾಜ್ಯ ಸರ್ಕಾರಕ್ಕೆ, ಸಚಿವ ಈಶ್ವರಪ್ಪ ಹಾಗೂ ಸಿಎಂ ಯಡಿಯೂರಪ್ಪ ನಡುವಿನ ರಂಪಾಟ ಮತ್ತೊಂದು ತಲೆ ನೋವು ತಂದಿದೆ. ಇದರ ಪರಿಣಾಮ ರಾಜ್ಯದ ಉಪ ಚುನಾವಣೆ ಮೇಲೆ ಆಗಲಿದ್ದು, ವರಿಷ್ಠರು ಮಧ್ಯಪ್ರವೇಶಿಸಬೇಕೆಂದು ಶಾಸಕರು ಒತ್ತಾಯಿಸಿದ್ದಾರೆ.
ಈ ಬಗ್ಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣಸಿಂಗ್ ಹಾಗೂ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷಗೆ ಪತ್ರ ಬರೆಯಲಾಗಿದೆ. ಹಾದಿಬೀದಿ ಜಗಳವನ್ನ ಕೂಡಲೇ ನಿಲ್ಲಿಸಿ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಣಾಮ ಬೀರಲಿದೆ ಎಂದಿದ್ದಾರೆ. ಹೀಗಾಗಿ ವರಿಷ್ಠರು ಮಧ್ಯಪ್ರವೇಶ ಮಾಡ್ತಾರಾ ಅಥವ ಬಿಎಸ್ವೈ ಅನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಲು ಇದನ್ನ ಅಸ್ತ್ರವಾಗಿ ಬಳಸಿಕೊಳ್ತಾರಾ ಕಾದು ನೋಡಬೇಕು.