‘ರಿಸೈನ್ ಕರ್ನಾಟಕ ಸಿಎಂ’ ಟ್ರೆಂಡ್

489

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಅನೈತಿಕ ಪೊಲೀಸಗಿರಿಯನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಿರುದ್ಧ ವಿಪಕ್ಷಗಳು ಸೇರಿದಂತೆ ಸಾರ್ವಜನಿಕರು ವಾಗ್ದಾಳಿ ನಡೆಸಿದ್ದಾರೆ. ಸೋಷಿಯಲ್ ಮೀಡಿಯಾ ಸೇರಿದಂತೆ ಎಲ್ಲೆಡೆ ಆಕ್ರೋಶ ಹೊರ ಹಾಕುತ್ತಿದ್ದು, ‘ರಿಸೈನ್ ಕರ್ನಾಟಕ ಸಿಎಂ’ ಅನ್ನೋದು ಟ್ರೆಂಡ್ ಆಗಿದೆ.

ಇನ್ನು ಸಿಎಂ ಸಪೋರ್ಟ್ ಮಾರೆಲ್ ಪೊಲೀಸಿಂಗ್ ಟ್ಯಾಗ್ ಲೈನ್ ಮೂಲಕ ಬರೆದಿರುವ ಪೋಸ್ಟ್ ಗಳು ಟ್ರೆಂಡ್ ಆಗುತ್ತಿವೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ ಬೆನ್ನೆಲ್ಲೇ ಸಿಎಂ ಹೇಳಿಕೆ ವಿರುದ್ಧ ವಿರೋಧ ವ್ಯಕ್ತವಾಗುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಡೆಯುತ್ತಿರುವ ಅನೈತಿಕ ಪೊಲೀಸಗಿರಿಯ ಬಗ್ಗೆ, ದಕ್ಷಿಣ ಕನ್ನಡ ಹಾಗೂ ಉಡುಪಿ ಪ್ರವಾಸದಲ್ಲಿದ್ದ ಸಿಎಂಗೆ ಪ್ರಶ್ನೆ ಕೇಳಲಾಗಿದೆ. ಇದನ್ನು ಸಮರ್ಥಸಿಕೊಂಡ ಅವರು, ಭಾವನೆಗಳಿಗೆ ಧಕ್ಕೆಯಾದಾಗ ಕ್ರಿಯೆ ಮತ್ತು ಪ್ರತಿಕ್ರಿಯೆ ಸಹಜ ಎಂದು ಹೇಳಿದ್ದಾರೆ. ಹೀಗಾಗಿ ಸಿಎಂ ರಾಜೀನಾಮೆ ನೀಡಬೇಕು ಅನ್ನೋ ಕೂಗು ಎದ್ದಿದೆ.




Leave a Reply

Your email address will not be published. Required fields are marked *

error: Content is protected !!