ಬೆಂಗಳೂರು: ಬಿಜೆಪಿ ಸಂಸದರಾಗಿರುವ ಪ್ರತಾಪ ಸಿಂಹ ಹಾಗೂ ತೇಜಸ್ವಿಸೂರ್ಯ ಅವರ ಬಗ್ಗೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಟ್ರೋಲ್ ಆಗ್ತಿದೆ. ನೆರೆಸಂತ್ರಸ್ತರಿಗಾಗಿ ಕೇಂದ್ರದಿಂದ ಪರಿಹಾರ ತೆಗೆದುಕೊಂಡು ಬನ್ನಿ ಅಂದ್ರೆ, ಕೋಟ್ಯಾಧಿಪತಿ ಶೋಗೆ ಬಂದ್ರಾ ಅಂತಾ ಜನ ಆಡಿಕೊಳ್ತಿದ್ದಾರೆ.
ಮೈಸೂರು ಸಂಸದ ಪ್ರತಾಪ ಸಿಂಹ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿಸೂರ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೋಟ್ಯಾಧಿಪತಿ ಶೋನಿಂದ ಎಷ್ಟು ಗೆದ್ದು ಪರಿಹಾರ ನೀಡ್ತೀರಿ. ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿ 2 ಕೋಟಿ ರೂಪಾಯಿ ನೀಡಿದ್ರೆ ಮುಗೀತಾ ಅಂತಾ ಕೇಳ್ತಿದ್ದಾರೆ.
ಸಂಸದರಾಗಿ ಪರಿಹಾರ ನೀಡಲು ಶೋ ಬೇಕಾ? ತಾಕತ್ತಿದ್ರೆ ಕೇಂದ್ರದಿಂದ ಪರಿಹಾರ ತೆಗೆದುಕೊಂಡು ಬನ್ನಿ ಎಂದು ಟ್ರೋಲ್ ಮಾಡಲಾಗ್ತಿದೆ. ಸಂಸದರು ಭಾಗವಹಿಸಿರುವ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ಈ ವಾರ ಪ್ರಸಾರವಾಗ್ತಿದೆ.