ಪ್ರಜಾಸ್ತ್ರ ಸುದ್ದಿ
ನವದೆಹಲಿ: ರಾಷ್ಟ್ರೀಯ ಜ್ಯೂನಿಯರ್ ಕುಸ್ತಿ ಚಾಂಪಿಯನ್ ಸಾಗರ ಧನಕರ್ ಕೊಲೆ ಪ್ರಕರಣ ಸಂಬಂಧ, ಖ್ಯಾತ ಕುಸ್ತಿಪಟು, ಒಲಿಂಪಿಕ್ಸ್ ಪದಕ ವಿಜೇಯತ ಸುಶೀಲಕುಮಾರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಅಲ್ದೇ ಒಟ್ಟು 19 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.
ಮೇ 4ರ ಮಧ್ಯರಾತ್ರಿ ಛತ್ರಸಾಲ್ ಕ್ರೀಡಾಂಗಣದಲ್ಲಿ ಸಾಗರ ಧನಕರ್ ಹಾಗೂ ಆತನ ಸ್ನೇಹಿತರಾದ ಸೋನು ಹಾಗೂ ಅಮಿತ ಮೇಲೆ ಗಂಭೀರ ಪ್ರಮಾಣದಲ್ಲಿ ಹಲ್ಲೆ ಮಾಡಿದ್ದಾರೆ. ಇದ್ರಿಂದಾಗಿ 23 ವರ್ಷದ ಸಾಗರ ಧನಕರ್ ಮೃತಪಟ್ಟಿದ್ದ. ಇದರಲ್ಲಿ ಸುಶೀಲಕುಮಾರ ಪ್ರಮುಖ ಆರೋಪಿಯಾಗಿದ್ದು, ಈತನೇ ಇದರ ಮಾಸ್ಟರ್ ಮೈಂಡ್ ಎಂದು ಆರೋಪಿಸಲಾಗಿದೆ.