ಪ್ರಜಾಸ್ತ್ರ ಸುದ್ದಿ
ಮೈಸೂರು: ನವರಾತ್ರಿಯ ಹಿನ್ನೆಲೆಯಲ್ಲಿ ಗುರುವಾರ ಹಾಗೂ ಶುಕ್ರವಾರ ರಾತ್ರಿ 10 ಗಂಟೆಯ ತನಕ ಚಾಮುಂಡೇಶ್ವರಿ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಿ ಎಂದು ಜಿಲ್ಲಾಧಿಕಾರಿಗೆ ತಿಳಿಸಿದ್ದೇನೆ ಅಂತಾ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಹೇಳಿದ್ದಾರೆ.
ನಿತ್ಯ ರಾತ್ರಿ 8 ಗಂಟೆಗೆ ಬಂದ್ ಮಾಡಲಾಗುತ್ತಿದೆ. ಈಗ ಜನರು ನಗರದಲ್ಲಿನ ದೀಪಾಲಂಕಾರ ನೋಡಿಕೊಂಡು ಬರುವುದು ತಡವಾಗುತ್ತೆ. ಹೀಗಾಗಿ 10 ಗಂಟೆಯ ತನಕ ಅವಕಾಶ ನೀಡಿ ಎಂದಿದ್ದೇನೆ. ಜಂಬೂ ಸವಾರಿ ಸಿದ್ಧತೆ ನಡೆದಿದೆ. 500 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಇನ್ನು ದೀಪಾವಳಿವರೆಗೂ ದೀಪಾಲಂಕಾರ ವಿಸ್ತರಣೆ ಮಾಡಿ ಎಂದು ಕೇಳಿಕೊಂಡಿದ್ದು, ಸಿಎಂ ಜೊತೆಗೆ ಚರ್ಚಿಸುತ್ತೇನೆ ಎಂದರು.