ಹುಚ್ಚಾಟ ಮಾಡಲು ಹೋಗಿ ಸಿಂಹಕ್ಕೆ ಬಲಿಯಾಗುತ್ತಿದ್ದ

532

ಪ್ರಜಾಸ್ತ್ರ ಸುದ್ದಿ

ಹೈದ್ರಾಬಾದ್: ಪ್ರವಾಸ ತಾಣಗಳಿಗೆ ಭೇಟಿ ನೀಡಿದಾಗ ಕೆಲವರು ಹುಚ್ಚಾಟ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಅನೇಕ ಘಟನೆಗಳಿವೆ. ಕೆಲವರ ಅದೃಷ್ಟ ಚೆನ್ನಾಗಿದ್ದು ಸ್ವಲ್ಪದರಲ್ಲಿ ಬದುಕುಳಿದಿದ್ದಾರೆ. ಅದೇ ರೀತಿ ಇಲ್ಲೊಬ್ಬ ನೆಹರು ಝೂವಲಾಜಿಕಲ್ ಪಾರ್ಕ್ ಗೆ ಬಂದವನು ಪಾರ್ಕ್ ನೋಡಿ ಹೋಗಿಲ್ಲ. ಬದಲಿಗೆ ಹುಚ್ಚಾಟ ಮಾಡಿದ್ದಾನೆ.

31 ವರ್ಷದ ಯುವಕನೊಬ್ಬ ಪ್ರವೇಶವಿಲ್ಲದ ಜಾಗದ ಮೂಲಕ ಸಿಂಹ ಇರುವ ಜಾಗಕ್ಕೆ ಹೋಗಿದ್ದಾನೆ. ಆಫ್ರಿಕಾ ಮೂಲದ ಸಿಂಹದ ಗುಹೆಯ ಬಂಡೆಯ ಕಲ್ಲಿನ ಮೇಲೆ ಕುಳಿತಿದ್ದಾನೆ. ಇದನ್ನು ನೋಡಿದ ಇತರರು ಕೂಗಿಕೊಂಡಿದ್ದಾರೆ. ಕೆಳಗಿದ್ದ ಸಿಂಹ ಘರ್ಜಿಸಿದೆ. ಜನರ ಕೂಗಾಟ ಕೇಳಿ ಸ್ಥಳಕ್ಕೆ ಬಂದ ಸಿಬ್ಬಂದಿ ಅವನಿಗೆ ಎರಡೇಟು ಕೊಟ್ಟು ಕರೆದುಕೊಂಡು ಹೋಗಿದ್ದಾರೆ.

ಬಂಡೆಯ ಮೇಲೆ ಕುಳಿತಾಗ ಸ್ವಲ್ಪ ಯಾಮಾರಿದರೂ ಸಿಂಹಕ್ಕೆ ಆಹಾರವಾಗಿ ಬಿಡುತ್ತಿದ್ದ. ಇಂತಹ ಹುಚ್ಚಾಟ ಮಾಡಿದ ಸಾಯಿಕುಮಾರ್ ಎಂಬಾತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.




Leave a Reply

Your email address will not be published. Required fields are marked *

error: Content is protected !!