ಕುಟುಂಬಕ್ಕೆ ಒಂದೇ ಟಿಕೆಟ್ ನಮಗೆ ಅನ್ವಯಿಸಲ್ಲ

199

ಪ್ರಜಾಸ್ತ್ರ ಸುದ್ದಿ

ದಾವಣಗೆರೆ: ಎಐಸಿಸಿ ಇತ್ತೀಚೆಗೆ ಚಿಂತನ ಸಭೆ ನಡೆಸಿತು. ಈ ವೇಳೆ ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ಎಂದು ಹೇಳಿದೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಲ್ಲಿ ಎಷ್ಟರ ಮಟ್ಟಿಗೆ ಟೆನ್ಷನ್ ತಂದಿದೆ ಗೊತ್ತಿಲ್ಲ. ಯಾಕಂದರೆ, ಕಾಂಗ್ರೆಸ್ ಹಿರಿಯ ಮಾಜಿ ಸಚಿವ ಶಾಮನೂರ ಶಿವಶಂಕರಪ್ಪ ಹೇಳಿರುವ ಮಾತು ಸಾಕ್ಷಿಯಾಗಿದೆ.

ಕುಟುಂಬಕ್ಕೆ ಒಂದೇ ಟಿಕೆಟ್ ಅನ್ನೋದು ನಮಗೆ ಅನ್ವಯಿಸುವುದಿಲ್ಲ. ನಾನು ಕೇಳಿದರೆ ನಾಲ್ಕು ಟಿಕೆಟ್ ಕೊಡುತ್ತಾರೆ. ಗೆಲ್ಲುವವರು ಬೇಕು ಅಷ್ಟೆ ಎಂದಿದ್ದಾರೆ. 92ನೇ ಜನ್ಮ ದಿನ ಆಚರಿಸಿಕೊಂಡು ಅವರ, ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಸಿಎಂ ಆಗುವುದರ ಬಗ್ಗೆ ಕೋಡಿಮಠದ ಸ್ವಾಮೀಜಿಗೆ ಕೇಳಿ ಎಂದಿದ್ದಾರೆ.

ಶಾಮನೂರ ಶಿವಶಂಕರಪ್ಪನವರ ಮೊಮ್ಮಗಳು ಹಾಗೂ ಸಿಎಂ ಬೊಮ್ಮಾಯಿ ಅವರ ಸಹೋದರಿ ಪುತ್ರನ ಮದುವೆಯಲ್ಲಿ ಭಾಗವಹಿಸಿದ ವೇಳೆ ಈ ರೀತಿ ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!