ಪ್ರಜಾಸ್ತ್ರ ಸುದ್ದಿ
ಗದಗ: ನಗರದ ಬೆಟಗೇರಿ ಬಡಾವಣೆಯ ಪೊಲೀಸ್ ಕಾನ್ಸ್ ಟೇಬಲ್ ನೇಣು ಹಾಕಿಕೊಂಡ ಘಟನೆ ಸಂಬಂಧ 9 ಜನರ ಮೇಲೆ ಎಫ್ಐಆರ್ ದಾಖಲಾಗಿದೆ. ಇದರಲ್ಲಿ 5 ಪೊಲೀಸರು ಹಾಗೂ ಇಬ್ಬರು ಪತ್ರಕರ್ತರಿದ್ದಾರೆ.
ಪೇದೆ ಅರ್ಜುನ್ ಪಾಟೀಲ ಎಂಬಾತ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ವೇಳೆ ಡೆತ್ ನೋಟ್ ಬರೆದಿಟ್ಟಿದ್ದಾನೆ. ಆತ್ಮಹತ್ಯೆ ಸಂಬಂಧ ಕಿರುಕುಳ ನೀಡಿದ 9 ಜನರ ವಿರುದ್ಧ ಕೇಸ್ ದಾಖಲಾಗಿದೆ.
ಬೆಟಗೇರಿ ಪೊಲೀಸ್ ಠಾಣೆಯ ಎಎಸ್ಐ ಪುಟ್ಟಪ್ಪ ಕೌಜಲಗಿ, ಕಾನ್ಸ್ ಟೇಬಲ್ ಗಳಾದ ಸಿ.ಆರ್ ನಾಯಕರ, ದಾದಾಪೀರ ಮಜಲಾಪೂರ, ಶರಣಪ್ಪ ಅಂಗಡಿ, ಅಂದಪ್ಪ ಹಂಜಿ, ವಿಠ್ಠಲ ಹಬೀಬ್, ಗುರುರಾಜ್ ತಳ್ಳಿಹಾಳ, ಪತ್ರಕರ್ತರಾದ ಭೀಮನಗೌಡ ಪಾಟೀಲ, ಗಿರೀಶ್ ಕುಲ್ಕರ್ಣಿ ಎಂಬುವವರು ವಿರುದ್ಧ ಎಫ್ಐಆರ್ ದಾಖಲಾಗಿದೆ.