ಖಾಯಂ ಕೆಲಸಕ್ಕಾಗಿ ಆಗ್ರಹಿಸಿ ಧರಣಿ

443

ಸಿಂದಗಿ: ಕೆಲಸ ಖಾಯಂ ಮಾಡಬೇಕೆಂದು ಒತ್ತಾಯಿಸಿ, ತಾಲೂಕಿನ ಹಂದಿಗನೂರ ಗ್ರಾಮ ಪಂಚಾಯ್ತಿ ಕಾರ್ಯಲಯದ ಎದುರು ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ನಡೆಸಲಾಗ್ತಿದೆ. ಮುರಗೇಂದ್ರ ಮಡಿವಾಳಪ್ಪ ಹುಣಶ್ಯಾಳ ಎಂಬುವರು ಸುಮಾರು 2 ವರ್ಷಗಳಿಂದ ಕರ ವಸೂಲಿ ಗುಮಾಸ್ತನಾಗಿ ಕಾರ್ಯನಿರ್ವಹಿಸ್ತಿದ್ದಾರೆ.

ಮುರಗೇಂದ್ರ ಹುಣಶ್ಯಾಳರ ಕೆಲಸ ಖಾಯಂ ಮಾಡಿಕೊಡಲಾಗುತ್ತೆ ಎಂದು ಹೇಳಿದ ಅಂದಿನ ಗ್ರಾಮ ಪಂಚಾಯ್ತಿ ಅಧ್ಯಕ್ಷ ಹಾಗೂ ಪಿಡಿಒ, ಇದೀಗ ಬೇರೊಬ್ಬರನ್ನ ನೇಮಿಸಿಕೊಂಡಿದ್ದಾರೆ. ಸಂಗಪ್ಪ ತಳವಾರ ಎಂಬಾತನನ್ನ ನೇಮಿಸಿಕೊಳ್ಳಲಾಗಿದೆ. ಆತ ಅಧ್ಯಕ್ಷರ ಸಂಬಂಧಿಯಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಮ್ಗೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿ ಸೆಪ್ಟೆಂಬರ್ 4ರಿಂದ ಮುರುಗೇಂದ್ರ ಧರಣಿ ನಡೆಸ್ತಿದ್ದಾರೆ. ಇವರ ಹೋರಾಟಕ್ಕೆ ಸಿಐಟಿಯು ಸಂಘಟನೆ ಬೆಂಬಲ ವ್ಯಕ್ತಪಡಿಸಿದೆ.




Leave a Reply

Your email address will not be published. Required fields are marked *

error: Content is protected !!