ಸತೀಶಗೆ ಎಷ್ಟು ಗಂಡಸ್ತನವಿದೆ: ರಮೇಶ

461

ಬೆಳಗಾವಿ: ಆಪರೇಷನ್ ಕಮಲಕ್ಕೆ ಸತೀಶ ಜಾರಕಿಹೊಳಿ ಹಾಗೂ ಎಂ.ಬಿ ಪಾಟೀಲ ಕಾರಣವೆಂದು ಅನರ್ಹ ಶಾಸಕ ರಮೇಶ ಜಾರಕಿಹೊಳಿ ಹೇಳಿದ್ದಾರೆ. ಇದು ಅಲ್ದೇ ಇನ್ನು 10-15 ಜನ ಶಾಸಕರು ಇದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಇಂದು ಗೋಕಾಕದಲ್ಲಿ ನಡೆದ ಸಂಕಲ್ಪ ಸಮಾವೇಶದಲ್ಲಿ ಮಾತ್ನಾಡಿದ ಅವರು, ಬುದ್ಧ, ಬಸವ ಹೆಸರಿನಲ್ಲಿ ಸತೀಶ ಜಾರಕಿಹೊಳಿ ಯಮಕನಮರಡಿಯಲ್ಲಿ 1 ಸಾವಿರ ಎಕರೆ ಲೂಟಿ ಮಾಡಿದ್ದಾನೆ. ನನ್ಗೂ ಮತ್ತು ಲಖನಗೂ ಜಗಳ ಹಚ್ಚುತ್ತಿದ್ದೇನೆ ಅಂತಾ ಕಿಡಿ ಕಾರಿದ್ರು. ಭೀಮಶಿ ಮತ್ತು ಲಖನ ಹಾಳು ಮಾಡ್ತಿರುವುದು ಸತೀಶ ಎಂದು ವಾಗ್ದಾಳಿ ನಡೆಸಿದ್ರು.

ನಾನು ಬೇಕಾದ್ರೆ ಗೋಕಾಕ ಬಿಟ್ಟು ಯಮಕನಮರಡಿಯಿಂದ ಸ್ಪರ್ಧಿಸುತ್ತೇನೆ. ಸತೀಶಗೆ ಎಷ್ಟು ಗಂಡಸ್ತನವಿದೆ ಗೊತ್ತಿದೆ ಎಂದು ತುಂಬಾ ಖಾರವಾಗಿ ವಾಗ್ದಾಳಿ ನಡೆಸಿದ್ರು. ಸಿದ್ದರಾಮಯ್ಯ, ಖರ್ಗೆಯಂತವರು ಇದ್ರೂ ನನ್ಗೆ ನ್ಯಾಯ ಸಿಗ್ಲಿಲ್ಲ. ಹೀಗಾಗಿ ನಾನು ಹೋದೆ. ಹಣಕ್ಕಾಗಿ ನಾನು ಹೋಗಿಲ್ಲವೆಂದು ಅನರ್ಹ ಶಾಸಕ ರಮೇಶ ಜಾರಕಿಹೊಳಿ ತಿಳಿಸಿದ್ರು.




Leave a Reply

Your email address will not be published. Required fields are marked *

error: Content is protected !!