‘ಕೈ’ ಕೊಡ್ತಾರಾ ರೋಷನ್ ಬೇಗ್..?

438

ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕ ರೋಷನ್ ಬೇಗ್, ಎನ್ ಡಿಎ ಸರ್ಕಾರ ಮರಳಿ ಬರಲು ಅಗತ್ಯ ಬಿದ್ದರೆ, ಮುಸ್ಲಿಂ ಸಹೋದರರು ಬೆಂಬಲ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಈ ಮೂಲಕ ಅವರು ಕಾಂಗ್ರೆಸ್ ನಿಂದ ದೂರ ಸರಿಯುವ ಸುಳಿವು ನೀಡಿದ್ದಾರೆ ಎನ್ನಲಾಗುತ್ತಿದೆ.

ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಮುಸ್ಲಿಂ ಸಹೋದರರು, ಎನ್ ಡಿಎ ಸರ್ಕಾರ ಮರಳಿ ಬರಲು ಬೆಂಬಲ ಸೂಚಿಸಬೇಕೆಂದು ಹೇಳಿದ್ದಾರೆ. ಕರ್ನಾಟಕದಲ್ಲಿ ಒಬ್ಬ ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೇಟ್ ನೀಡಿದೆ. ಯಾವುದೇ ಇಂದು ಪಾರ್ಟಿಗೆ ನಿಯತ್ತಾಗಿದ್ದರೆ, ಏನಾಗುತ್ತೆ ಅನ್ನೋದು ಕರ್ನಾಟಕದಲ್ಲಿ ನೋಡಿದ್ದೀರಿ. ಕೇವಲ ಒಂದು ಸೀಟ್ ಅನ್ನು ಮುಸ್ಲಿಂರಿಗೆ ನೀಡಲಾಗಿದೆ ಅಂತಾ ಅಸಮಾಧಾನ ಹೊರ ಹಾಕಿದ್ದಾರೆ.

ಮಾಜಿ ಸಚಿವ ರೋಷನ್ ಬೇಗ್ ಅವರ ಹೇಳಿಕೆಯಿಂದ ಇದೀಗ ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಸಾಕಷ್ಟು ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!