ಸಿಂದಗಿ: ಪಟ್ಟಣದ ಸಾಯಿಬಾಬಾ ಬಡವಾಣೆಯಲ್ಲಿನ ಸಾಯಿಬಾಬಾ ದೇಗುಲದಲ್ಲಿ ಜಾತ್ರಾ ಮಹೋತ್ಸವ ನೆರವೇರಿತು. ಈ ವೇಳೆ ಬೆಳಗ್ಗೆಯಿಂದ ಸಂಜೆಯವರೆಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದ್ವು. ಮುಂಜಾನೆ ವಿಶೇಷ ಅಭಿಷೇಕ ಪೂಜೆ ನಡೆಯಿತು.
ಜಾತ್ರೆಯ ಅಂಗವಾಗಿ ನೂರಾರು ಜನ ಮುತ್ತೈದೆಯರಿಗೆ ಉಡಿ ತುಂಬುವ ಶಾಸ್ತ್ರವನ್ನ ಮಾಡಲಾಯ್ತು. ಇದರ ಜೊತೆಗೆ ಮುಂಜಾನೆಯಿಂದ ಸಂಜೆಯವರೆಗೂ ಅನ್ನಸಂತರ್ಪಣೆಯ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಪಟ್ಟಣದ ವಿವಿಧ ಕಡೆಯಿಂದ ಬಂದ ಭಕ್ತರು ಪೂಜಾ ಕೈಂಕರ್ಯ ಮುಗಿದ್ಮೇಲೆ ಪ್ರಸಾದ ಸ್ವೀಕರಿಸಿದ್ರು.
ಇನ್ನು ಶಾಲಾ ಮಕ್ಕಳಿಗಾಗಿ ರಂಗೋಲಿ ಸ್ಪರ್ಧೆಯನ್ನ ಆಯೋಜನೆ ಮಾಡಲಾಗಿತ್ತು. ವಿವಿಧ ಬಣ್ಣಗಳ ರಂಗೋಲಿ, ಉಪ್ಪು, ಮರಳು ಸೇರಿದಂತೆ ಅನೇಕ ಬಗೆಯ ವಸ್ತುಗಳಿಂದ ಬಿಡಿಸಿದ ರಂಗೋಲಿ ಚಿತ್ರಗಳು ನೋಡುಗರ ಕಣ್ಮನ ಸೆಳೆಯುತ್ತಿದ್ವು.