ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕರೋನಾ ನಿಧಾನವಾಗಿ ಒಂದು ಹಂತಕ್ಕೆ ಬರ್ತಿದ್ದು, ಶೈಕ್ಷಣಿಕ ವರ್ಷ ಸಹ ಮುಗಿಯುತ್ತಾ ಬರ್ತಿದೆ. ಹೀಗಿರುವಾಗ ಶಾಲಾ, ಕಾಲೇಜುಗಳು ಶುರು ಮಾಡದೆ ಹೋದರೆ ಮಕ್ಕಳ ಒಂದು ವರ್ಷದ ವಿದ್ಯಾಭ್ಯಾಸ ಹಾಳಾಗುತ್ತೆ ಅನ್ನೋ ಮಾತುಗಳು ಕೇಳಿ ಬಂದಿವೆ. ಹೀಗಾಗಿ ಜನವರಿ 1ರಿಂದ ಶಾಲಾ, ಕಾಲೇಜು ಶುರುವಿಗೆ ಸಿದ್ಧತೆ ನಡೆದಿದೆಯಂತೆ.
ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಶನಿವಾರ ಸಭೆ ನಡೆಯುತ್ತಿದೆ. ಶಿಕ್ಷಣ ತಜ್ಞರು ಹಾಗೂ ಸಚಿವರು ಈ ವೇಳೆ ಭಾಗವಹಿಸಲಿದ್ದಾರೆ. ಈಗಾಗ್ಲೇ ಆರೋಗ್ಯ ಇಲಾಖೆ ಹಾಗೂ ತಾಂತ್ರಿಕ ಶಿಕ್ಷಣ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿವೆ. ಆದ್ರಿಂದ ಇಂದಿನ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಬಹುದು ಎನ್ನಲಾಗ್ತಿದೆ.